ಮುಖ್ಯಮಂತ್ರಿ ಕುಮಾರ ಸ್ವಾಮಿ ಶುಕ್ರವಾರ ಎಂಬಿ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿದ್ದು ಕಾಂಗ್ರೆಸ್ ಕ್ಯಾಂಪ್ ಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ, ಕುಮಾರ ಸ್ವಾಮಿ ಭೇಟಿ ಬಳಿಕ, ಎಂಬಿ ಪಾಟೀಲ್ ದೆಹಲಿಗೆ ತೆರಳಲು ಬಯಸಿದ್ದರು. ಕುಮಾರ ಸ್ವಾಮಿ ಮಧ್ಯಸ್ಥಿಕೆ ರಾಜ್ಯ ಕಾಂಗ್ರೆಸ್ ಮುಖಂಡರ ನಾಯಕತ್ವವನ್ನು ಪ್ರಶ್ನಿಸುವಂತೆ ಮಾಡಿದೆ, ಎಐಸಿಸಿ ಪ್ರತಿನಿಧಿಗಳು ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ, ನಾವು ಸಮ್ಮಿಶ್ರ ಸರ್ಕಾರದಲ್ಲಿದ್ದೇವೆ, ಕಾಂಗ್ರೆಸ್ ಮತ್ತು ಜೆಡಿಎಸ್ ಜವಾಬ್ದಾರಿಯಾಗಿದೆ, ಶಾಸಕರನ್ನು ಸಿಎಂ ಭೇಟಿ ಮಾಡಿದರೇ ಸಮಸ್ಯೆ ಹೇಗೆ ಉಂಟಾಗುತ್ತದೆ ಎಂದು ಎಐಸಿಸಿ ಕಾರ್ಯದರ್ಶಿ ಪ್ರಶ್ನಿಸಿದ್ದಾರೆ.