ಬಿಎಸ್ಪಿಯಿಂದ ಗೆದ್ದು ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿರಾಗಿರುವ ಎನ್.ಮಹೇಶ್, ವಿಡಿಯೋದಲ್ಲಿ ಅಮ್ಮ ಭಗವಾನ್ ಅವರ ಚಪ್ಪಲಿಯನ್ನು ಮೈಮೇಲೆ ಸವರಿಕೊಳ್ಳುವ ಮೂಲಕ ಅಂಬೇಡ್ಕರ್ ಸಿದ್ಧಾಂತವನ್ನು ಗಾಳಿಗೆ ತೂರಿದ್ದಾರೆ ಎಂದು ಅವರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.