ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ: ಎಚ್ ಡಿಕೆ

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಥಾನ ...
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ

ಮಂಗಳೂರು: ಕರ್ನಾಟಕ  ವಿಧಾನಸಭೆಯಿಂದ  ರಾಜ್ಯಸಭೆಗೆ  ನಡೆಯಲಿರುವ ಚುನಾವಣೆಯಲ್ಲಿ ಸ್ಥಾನ ಪಡೆಯಲು  ಕಾಂಗ್ರೆಸ್  ಪಕ್ಷವನ್ನು ಬೇಡಿಕೊಳ್ಳುವ  ಅಗತ್ಯ ಜೆಡಿಎಸ್ ಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ  ಜೆಡಿಎಸ್ ರಾಜ್ಯಾಧ್ಯಕ್ಷ  ಎಚ್.ಡಿ.ಕುಮಾರಸ್ವಾಮಿ  ಹೇಳಿದ್ದಾರೆ. 
 
ಮಂಗಳೂರಿನಲ್ಲಿ ನಿನ್ನೆ   ಸುದ್ದಿಗಾರರೊಂದಿಗೆ ಮಾತನಾಡಿದ  ಅವರು,  ತಮ್ಮ  ಪಕ್ಷದೊಂದಿಗೆ  ಯಾವುದೇ  ರೀತಿಯ  ಹೊಂದಾಣಿಕೆ  ಮಾಡಿಕೊಳ್ಳುವ  ಅಗತ್ಯವಿಲ್ಲ  ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸುತ್ತ ಕಳೆದ ರಾಜ್ಯಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಆಡಿದ ನಾಟಕವನ್ನು ಜೆಡಿಎಸ್ ಮರೆತಿಲ್ಲ  ಎಂದು  ತಿರುಗೇಟು  ನೀಡಿದರು. 

ನಂಜನಗೂಡು-ಗುಂಡ್ಲುಪೇಟೆ  ವಿಧಾನಸಭಾ ಉಪಚುನಾವಣೆ  ಮತ್ತು   ಬೆಂಗಳೂರು  ಮೇಯರ್ ಚುನಾವಣೆ  ವೇಳೆ  ಹೊಂದಾಣಿಕೆಗಾಗಿ  ತಮಗೆ  ಕರೆ  ಮಾಡಿದ್ದು,  ಯಾರು  ಎಂದು ಮುಖ್ಯಮಂತ್ರಿಗೆ  ನೆನಪಿಲ್ಲವೇ  ಎಂದು  ಪ್ರಶ್ನಿಸಿದರು. 

ನೈಸ್ ಹಗರಣದ ಪ್ರಮುಖ ಆರೋಪಿ ಅಶೋಕ್ ಖೇಣಿ ಅವರನ್ನು ಪಕ್ಷಕ್ಕೆ  ಸೇರಿಸಿಕೊಂಡು,
ತನ್ನ  ಭ್ರಷ್ಟ ಗುಣವನ್ನು ಕಾಂಗ್ರೆಸ್ ಪಕ್ಷ ಬಹಿರಂಗಗೊಳಿಸಿದೆ ಎಂದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com