ಸಂವಿಧಾನದಲ್ಲಿ ಹಿಂದೂ, ಬೌದ್ಧರಿಗೆ ಮತ್ತು ಸಿಖ್ಖರಿಗೆ ಮಾತ್ರ ಎಸ್ಪಿ ಮೀಸಲಾತಿ ಕಲ್ಪಿಸಲಾಗಿದೆ. ಒಂದು ವೇಳೆ ವೀರಶೈವ, ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿದರೆ ಅವರು ಎಸ್ಸಿ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಇದೇ ಕಾರಣಕ್ಕೆ 20013ರಲ್ಲಿ ಯುಪಿಎ ಸರ್ಕಾರ ವೀರಶೈವ, ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ನಿರಾಕರಿಸಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರ ರಾಜಕೀಯ ಲಾಭಕ್ಕಾಗಿ ತನ್ನ ಹಿಂದಿನ ನಿರ್ಧಾರ ಮರೆತು ಉಲ್ಟಾ ಹೊಡೆದಿದೆ ಎಂದು ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಮೆಘವಾಲ್ ಅವರು ಆರೋಪಿಸಿದ್ದಾರೆ.