ರಾಜ್ಯಸಭೆ ಚುನಾವಣೆ: ಬಂಡಾಯ ಶಾಸಕರ ಮೇಲೆ ನಿಂತಿದೆ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಭವಿಷ್ಯ

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಬಂಡಾಯ ಶಾಸಕರಿಗೆ ಮತದಾನ ಮಾಡುವ ಹಕ್ಕಿನ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಭವಿಷ್ಯ ನಿಂತಿದೆ....
ಸಂಸತ್ತು
ಸಂಸತ್ತು
Updated on
ಬೆಂಗಳೂರು:  ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಬಂಡಾಯ ಶಾಸಕರಿಗೆ ಮತದಾನ ಮಾಡುವ ಹಕ್ಕಿನ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಭವಿಷ್ಯ ನಿಂತಿದೆ.
ಜೆಡಿಎಸ್ ನ 7 ಬಂಡಾಯ ಶಾಸಕರಿಗೆ ಮತದಾನ ಮಾಡದಂತೆ ಸ್ಪೀಕರ್ ಕೋಳಿವಾಡ ಅವರಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. 
ಸ್ಪೀಕರ್ ಗೆ ಆದೇಶ ಮಾಡುವ ಹಕ್ಕು ಹೈಕೋರ್ಟ್ ಗೆ ಇಲ್ಲ ಎಂದು ಶಾಸಕರು ವಾದಿಸಿದ್ದಾರೆ. ಇಂದು ಈ ಸಂಬಂಧ ತೀರ್ಪು ಹೊರ ಬೀಳಲಿದೆ.
ಬಂಡಾಯ ಶಾಸಕರು ಮತದಾನ ಮಾಡುವುದು ಅಥವಾ ಮಾಡದೇ ಇರುವುದು ರಾಜ್ಯ ಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಾಂಗ್ರೆಸ್ ನ ಹಾಗೂ ಜೆಡಿಎಸ್ ನ ಅಭ್ಯರ್ಥಿ ಭವಿಷ್ಯ ನಿರ್ಧಾರವಾಗಲಿದೆ, ಜೆಡಿಎಸ್ ನ ಬಂಡಾಯ ಶಾಸಕರು ಮತದಾನ ಮಾಡಿದರಷ್ಟೇ ಕಾಂಗ್ರೆಸ್ ನ ಮೂರನೇ ಅಭ್ಯರ್ಥಿ ಗೆಲ್ಲಲು ಸಾಧ್ಯ., ಹಾಗೆಯೇ ಜೆಡಿಎಸ್ ಅಭ್ಯರ್ಥಿ  ಫಾರೂಖ್ ಗೆಲುವಿಗೂ ಕೂಡ ಬಂಡಾಯ ಅಭ್ಯರ್ಥಿಗಳು ಮತದಾನ ಮಾಡುವ ಅವಶ್ಯಕತೆಯಿದೆ.
ಒಂದು ವೇಳೆ ಮತದಾನ ಮಾಡದಂತೆ ಸ್ಪೀಕರ್  ಆದೇಶ ನೀಡಿದರೇ ಫಾರೂಖ್ ಅವರಿಗೆ ಈ ಬಾರಿಯೂ  ಸೋಲು ಖಚಿತ, 2016ರ ರಾಜ್ಯ ಸಭೆ ಚುನಾವಣೆಯಲ್ಲಿ  ಫಾರೂಖ್ ಅವರಿಗೆ ಮತದಾನ ನೀಡುವಂತೆ ಜೆಡಿಎಸ್ ವಿಪ್ ನೀಡಿತ್ತು, ಆದರೆ 7 ಬಂಡಾಯ ಶಾಸಕರು ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com