ಕೆ.ಜಿ ಬೋಪಯ್ಯ ಹಾಲಿ ಶಾಸಕರಾಗಿದ್ದು, ಟಿಕೆಟ್ ನಿರಾಕರಿಸುವುದು ಕಷ್ಟಸಾಧ್ಯವಿದೆ, ಟಿಕೆಟ್ ನೀಡಿದರೆ ವಿರಾಜಪೇಟೆಯಲ್ಲಿ ನಿರ್ಣಾಯಕವಾಗಿರುವ ಕೊಡವರ ಓಟುಗಳೂ ಚದುರಿಹೋಗುವ ಸಾಧ್ಯತೆ ದಟ್ಟವಾಗಿದೆ. ವಿರಾಜಪೇಟೆಯಿಂದ ಸ್ಪರ್ಧಿಸಲು ಸುಜಾ ಕುಶಾಲಪ್ಪ, ಮಾಚಿಮಾಡ ರವೀಂದ್ರ, ಪಟ್ಟಡ ರೀನಾ ಪ್ರಕಾಶ್, ಪತ್ರಕರ್ತ, ಅಂಕಣಕಾರ ಸಂತೋಷ್ ತಮ್ಮಯ್ಯ ಅವರ ಹೆಸರೂ ಕೇಳಿಬಂದಿದೆ. ಟಿಕೆಟ್ ಹಂಚಿಕೆ ನಿರ್ಧಾರ ಹೈಕಮಾಂಡ್ ಅಂಗಳದಲ್ಲಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಕುತೂಹಲದ ಕೇಂದ್ರ ಬಿಂದುವಾಗಿದ್ದು, ಹೈಕಮಾಂಡ್ ಗೆ ಸವಾಲಿನ ಕ್ಷೇತ್ರವಾಗುವ ಲಕ್ಷಣಗಳಿವೆ.