ಚುನಾವಣಾ ಆಯೋಗಕ್ಕೂ ಮುನ್ನ ಕರ್ನಾಟಕ ಚುನಾವಣಾ ದಿನಾಂಕ ಪ್ರಕಟಿಸಿದ್ದು ತಪ್ಪು: ಬಿಜೆಪಿ

ಚುನಾವಣಾ ಆಯೋಗಕ್ಕೂ ಮುನ್ನವೇ ಕರ್ನಾಟಕ ಚುನಾವಣಾ ದಿನಾಂಕವನ್ನು ಪ್ರಕಟಿಸಿರುವುದಕ್ಕೆ ಬಿಜೆಪಿ ತಪ್ಪೊಪ್ಪಿಕೊಂಡಿದೆ...
ಮುಖ್ತರ್ ಅಬ್ಬಾಸ್ ನಖ್ವಿ
ಮುಖ್ತರ್ ಅಬ್ಬಾಸ್ ನಖ್ವಿ
Updated on
ನವದೆಹಲಿ: ಚುನಾವಣಾ ಆಯೋಗಕ್ಕೂ ಮುನ್ನವೇ ಕರ್ನಾಟಕ ಚುನಾವಣಾ ದಿನಾಂಕವನ್ನು ಪ್ರಕಟಿಸಿರುವುದಕ್ಕೆ ಬಿಜೆಪಿ ತಪ್ಪೊಪ್ಪಿಕೊಂಡಿದೆ. 
ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಮಿತ್ ಮಾಳವಿಯಾ ಚುನಾವಣಾ ಆಯೋಗಕ್ಕೂ ಮುನ್ನವೇ ಕರ್ನಾಟಕ ವಿಧಾನಸಭೆ ಚುನಾವಣಾ ದಿನಾಂಕವನ್ನು ಟ್ವೀಟ್ ಮಾಡಿದ್ದರು. ಇದಾದ ಬಳಿಕ ಕೇಂದ್ರ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ನೇತೃತ್ವದ ಬಿಜೆಪಿ ನಿಯೋಗವು ಚುನಾವಣಾ ಆಯೋಗವನ್ನು ಭೇಟಿ ಮಾಡಿತ್ತು. 
ಟಿವಿ ಚಾನಲ್ ಗಳ ವರದಿ ಆಧಾರದ ಮೇಲೆ ಅಮಿತ್ ಮಾಳವಿಯಾ ಚುನಾವಣಾ ದಿನಾಂಕವನ್ನು ಟ್ವೀಟ್ ಮಾಡಿದ್ದಾರೆ ಎಂದ ಚುನಾವಣಾ ಆಯೋಗಕ್ಕೆ ತಿಳಿಸಿತ್ತು. 
ಟಿವಿ ಚಾನಲ್ ಗಳ ವರದಿ ಆಧಾರದ ಮೇಲೆ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದು ಚುನಾವಣಾ ಆಯೋಗದ ಘನತೆಗೆ ಧಕ್ಕೆ ತರುವ ಉದ್ದೇಶ ಅವರದ್ದಾಗಿಲ್ಲ. ಕರ್ನಾಟಕದ ಕಾಂಗ್ರೆಸ್ ಮುಖಂಡರೊಬ್ಬರು ಸಹ ಇದೇ ರೀತಿ ಮುಂಚೆಯೇ ಟ್ವೀಟ್ ಮಾಡಿದ್ದಾರೆ ಎಂದು ನಖ್ವಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com