ರೆಡ್ಡಿ ಬಿಜೆಪಿ ವೇದಿಕೆ ಮೇಲೆ ಬಂದರೆ ವಾಟ್ಸ್ ಆಪ್ ಮಾಡಿ: ಮುರಳೀಧರ್ ರಾವ್

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿಯ ಸ್ಟಾರ್ ಪ್ರಚಾರಕ ಅಲ್ಲ, ಅವರೇನಾದರೂ ಬಿಜೆಪಿ ವೇದಿಕೆಯಲ್ಲಿ ಕಾಣಿಸಿಕೊಂಡರೆ ಫೋಟೊ, ವಿಡಿಯೋವನ್ನು ನನಗೆ ವಾಟ್ಸ್ ಆಪ್ ಮಾಡಿ ಎಂದು ರಾಜ್ಯ ಬಿಜೆಪಿ
ಮುರಳಿಧರ್ ರಾವ್
ಮುರಳಿಧರ್ ರಾವ್
Updated on
ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿಯ ಸ್ಟಾರ್ ಪ್ರಚಾರಕ ಅಲ್ಲ, ಅವರೇನಾದರೂ ಬಿಜೆಪಿ ವೇದಿಕೆಯಲ್ಲಿ ಕಾಣಿಸಿಕೊಂಡರೆ ಫೋಟೊ, ವಿಡಿಯೋವನ್ನು ನನಗೆ ವಾಟ್ಸ್ ಆಪ್ ಮಾಡಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಹೇಳಿದ್ದಾರೆ. 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಜನಾರ್ದನ ರೆಡ್ಡಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಿಎಂ ಅಭ್ಯರ್ಥಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಜನಾರ್ದನ ರೆಡ್ಡಿ ಬಿಜೆಪಿಯ ಸ್ಟಾರ್ ಪ್ರಚಾರಕ ಅಲ್ಲ ಎಂದು ಹೇಳಿದ್ದಾರೆ. 
ಜನಾರ್ದನ ರೆಡ್ದಿ ಆರೋಪಮುಕ್ತರಾಗದೇ ಪಕ್ಷಕ್ಕೆ ಎಂಟ್ರಿ ಇಲ್ಲ, ಕರುಣಾಕರ ರೆಡ್ದಿ ಹಾಗೂ ಸೋಮಶೇಖರ ರೆಡ್ದಿ ಪಕ್ಷದಲ್ಲಿ 20 ವರ್ಷದಿಂದ ಇದ್ದಾರೆ. ಜನಾರ್ದನ ರೆಡ್ದಿಯಿಂದ ಅವರು ಅಸ್ಥಿತ್ವ ಉಳಿಸಿಕೊಂಡಿಲ್ಲ ಹೀಗಾಗಿ ಟಿಕೆಟ್ ನೀಡಲಾಗಿದೆ. ಜನಾರ್ದನ ರೆಡ್ಡಿಯನ್ನು ಮುಂದಿಟ್ಟುಕೊಂಡು ಸೋಮಶೇಖರ ರೆಡ್ಡಿ  ಅವರನ್ನು ದೂಷಿಸುವುದು ಅಗತ್ಯವಿಲ್ಲ, ಬಿಎಸ್ ವೈ ಹೇಳಿಕೆ ಅವರ ವ್ಯಕ್ತಿಗತವಾದದ್ದು. ಪಕ್ಷ ಈ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದ್ದಾರೆ. 
ಇದೇ ವೇಳೆ ಒಂದು ವೇಳೆ ರೆಡ್ಡಿ ಬಿಜೆಪಿ ವೇದಿಕೆಯಲ್ಲಿ ಕಾಣಿಸಿಕೊಂಡರೆ ತಮ್ಮ ವಾಟ್ಸ್ ಆಪ್ ಗೆ ಫೋಟೋ ವಿಡಿಯೋಗಳನ್ನು ಕಳಿಸಿ, ಇದಕ್ಕೆ ನಾನು ಹೊಣೆಯಾಗಿರುತ್ತೇನೆ ಎಂದೂ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com