ಬೆಳಗ್ಗೆ ತಿಂಡಿಗೆ ದೋಸೆ, ಇಡ್ಲಿ, ಅಥವಾ ಉಪ್ಪಿಟ್ಟಿಗೆ ಆದ್ಯತೆ ನೀಡುತ್ತಾರೆ, ಜೊತೆಗೆ ಒಂದು ಗ್ಲಾಸ್ ಮಜ್ಜಿಗೆ ಹಾಗೂ ಪಪ್ಪಾಯ ಸೇವನೆ ಕಡ್ಡಾಯ. ಬೆಂಗಳೂರಿನಲ್ಲಿರಲಿ ಅಥವಾ ಮೈಸೂರಿನಲ್ಲೇ ಇರಲಿ ಮದ್ಯಾಹ್ನದ ಊಟಕ್ಕೆ ರಾಗಿ ಮುದ್ದೆ ನಾಟಿ ಕೋಳಿ ಸಾರು, ಕೈಮಾ ಉಂಡೆ ಮತ್ತು ಮೀನು ಸಾರು ತಿನ್ನಲು ಬಯಸುತ್ತಾರೆ, ಆದರೆ ಪ್ರಯಾಣದ ವೇಳೆ ಮಾತ್ರ ಸಸ್ಯಾಹಾರಕ್ಕೆ ಒತ್ತು ನೀಡುತ್ತಾರೆ. ದಿನದಲ್ಲಿ ಮೂರು ಬಾರಿ ಟೀ ಸೇವನೆ ಮಾಡುತ್ತಾರೆ, ಟೀ ಕುಡಿದ ನಂತರ ಒಂದು ಗ್ಲಾಸ್ ಬಿಸಿನೀರು ಕುಡಿಯುವುದನ್ನು ಮರೆಯುವುದಿಲ್ಲ, ಬಿಸಿನೀರಿನ ಸೇವನೆಯಿಂದ ಅವರ ಧ್ವನಿಯಲ್ಲಿ ಯಾವುದೇ ಸಮಸ್ಯೆಯಾಗದೇ ಉತ್ತಮ ಸ್ಥಿತಿಯಲ್ಲಿರುತ್ತದೆ. ಅತಿ ಹೆಚ್ಚಿನ ಆರೋಗ್ಯ ಪ್ರಜ್ಞೆ ಇರುವ ಸಿದ್ದರಾಮಯ್ಯ ರಾತ್ರಿ 2 ಚಪಾತಿ ಮಾತ್ರ ತಿನ್ನುತ್ತಾರೆ.ಮಧು ಮೇಹಿಯಾಗಿರುವ ಕಾರಣ ಸಕ್ಕರೆ ಇಲ್ಲದ ಪಾನೀಯಗಳಿಗೆ ಆದ್ಯತೆ ನೀಡುತ್ತಾರೆ.