ಚನ್ನಪಟ್ಟಣ ಮತ್ತು ರಾಮನಗರಗಳಲ್ಲಿ ಬತ್ತಿ ಹೋಗಿದ್ದ ಹಲವು ಕೆರೆಗಳಿಗೆ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ಶಿಂಷಾ ನದಿಯಿಂದ ನೀರು ತುಂಬಿಸಿದ್ದಾರೆ. ಸುಡು ಬೇಸಿಗೆಯಿದ್ದರೂ ಕ್ಷೇತ್ರದ ಬಹುತೇಕ ಕೆರೆಗಳಲ್ಲಿ ನೀರು ತುಂಬಿದೆ, ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಿದ್ದಕ್ಕೆ ಯೋಗೇಶ್ವರ್ ಅವರಿಗೆ ನಾವು ಋಣಿಯಾಗಿದ್ದೇವೆ, ಈ ಮೊದಲು 1,200 ರಿಂದ 1,500 ಅಡಿ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿರಲಿಲ್ಲ, ಆದರೆ ಈಗ ಕೇವಲ 400-500 ಅಡಿ ಕೊರದರೇ ನೀರು ಸಿಗುತ್ತಿದೆ, ಎಂದು ಮುನಿಯಪ್ಪನದೊಡ್ಡಿ ಬೊಂಬೆ ತಯಾರಕರಾದ ಮಂಜುನಾಥ್ ತಿಳಿಸಿದ್ದಾರೆ.