ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಕೇಂದ್ರ ಸಚಿವರು ಕರ್ನಾಟಕಕ್ಕೆ ಬಂದು ಚುನಾವಣಾ ಪ್ರಚಾರ ನಡೆಸಿದ್ದಾರೆ. ಚುನಾವಣಾ ಪ್ರಚಾರದ ಕೊನೆ ಕೊನೆಯಲ್ಲಿ ನಾಯಕರುಗಳ ಹೇಳಿಕೆ ತೀರಾ ವಯಕ್ತಿಕ ನಿಂದನೆಗೆ ತಿರುಗಿತು ಮೂರು ಪಕ್ಷಗಳ ನಾಯಕರು ನೆಗೆಟಿವ್ ಆಗಿ ಪ್ರಚಾರ ನಡೆಸಿದ್ದಾರೆ, ಆದರೆ ಕರ್ನಾಟಕ ಮತದಾರ ಸೂಕ್ಷ್ಮವಾಗಿದ್ದು, ಯಾವುದೇ ನೆಗೆಟಿವ್ ಹೇಳಿಕೆಗಳಿಗೆ ಮಹತ್ವ ನೀಡುವುದಿಲ್ಲ ಎಂದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಹೇಳಿದ್ದಾರೆ.