ಬೇರೆ ಪಕ್ಷಗಳ ಹಾಗೆ ನಾವು ಹಣ ಅಥವಾ ಉಡುಗೊರೆ ಅಥವಾ ಸಾರಾಯಿ ಹಂಚುತ್ತಿಲ್ಲ, ನಮಗೆ ಒಕ್ಕಲಿಗರ ಮತದಾರರ ಸಂಪೂರ್ಣ ಬೆಂಬಲವಿದೆ. ಹಳೇ ಮೈಸೂರು ಭಾಗದಲ್ಲಿ ಉತ್ತಮ ಬೆಂಬಲ ಸಿಗುತ್ತದೆ. ಒಂದು ವೇಳೆ ಅತಂತ್ರ ವಿಧಾನ ಸಭೆ ನಿರ್ಮಾಣವಾದರೇ ಸರ್ಕಾರ ರಚಿಸುವಲ್ಲಿ ಜೆಡಿಎಸ್ ಪ್ರಮುಖ ಪಾತ್ರ ವಹಿಸುತ್ತದೆ. ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಮೈತ್ರಿಯ ಬಗ್ಗೆ ಗೌಡರು ತುಟಿ ಬಿಚ್ಚಿಲ್ಲ.