ಎಚ್.ಡಿ ಕುಮಾರ ಸ್ವಾಮಿ
ರಾಜಕೀಯ
ನಿಖಿಲ್ ಜೊತೆ ಸಿಂಗಾಪುರಕ್ಕೆ ತೆರಳಿದ ಎಚ್.ಡಿ ಕುಮಾರಸ್ವಾಮಿ
ನಿರಂತರ ಪ್ರಚಾರದಿಂದ ದಣಿದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರು ಪುತ್ರ ನಿಖಿಲ್ ಜೊತೆ ಸಿಂಗಾಪುರಕ್ಕೆ ತೆರಳಿದ್ದಾರೆ. ...
ಬೆಂಗಳೂರು: ನಿರಂತರ ಪ್ರಚಾರದಿಂದ ದಣಿದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರು ಪುತ್ರ ನಿಖಿಲ್ ಜೊತೆ ಸಿಂಗಾಪುರಕ್ಕೆ ತೆರಳಿದ್ದಾರೆ.
ಕಮಾರ ಪರ್ವದ ಮೂಲಕ ರಾಜ್ಯ ಪ್ರವಾಸ ಮಾಡಿದ್ದ ಎಚ್ಡಿಕೆ ಅವರು ಪ್ರಚಾರದ ಕೊನೆ ದಿನಗಳಲ್ಲಿ ತೀವ್ರವಾಗಿ ಬಳಲಿದ್ದರು. ಹೀಗಾಗಿ ನಿನ್ನೆ ಸಂಜೆ 7 ಗಂಟೆಗೆ ಸಿಂಗಾಪೂರ್ ಗೆ ತೆರಳಿದ್ದಾರೆ
ಹೃದ್ರೋಗಿಯಾಗಿರುವ ಅವರು ವಿಶೇಷ ಪರೀಕ್ಷೆಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಮಂಗಳವಾರ ಫಲಿತಾಂಶ ಪ್ರಕಟವಾಗಲಿದ್ದು, ಸೋಮವಾರ ರಾತ್ರಿ ಇಬ್ಬರೂ ಬೆಂಗಳೂರಿಗೆ ವಾಪಾಸಾಗಲಿದ್ದಾರೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ