ಕಾಂಗ್ರೆಸ್ ಎರಡು ಸಮುದಾಯಗಳ ನಾಯಕರನ್ನು ಡಿಸಿಎಂ ಮಾಡಲು ಬಯಸಿತ್ತು, ಲಿಂಗಾಯತ ಮತ್ತು ದಲಿತ ವ್ಯಕ್ತಿಗೆ ಡಿಸಿಎಂ ಪಟ್ಟ ಕೊಡಲು ಕಾಂಗ್ರೆಸ್ ತಯಾರಾಗಿತ್ತು, ಆದರೆ ಜೆಡಿಎಸ್ ಇದಕ್ಕೆ ಒಪ್ಪಲಿಲ್ಲ., ಹೀಗಾಗಿ ದಲಿತ ನಾಯಕ ಪರಮೇಶ್ವರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಒಕ್ಕಲಿಗರಾಗಿರುವ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಲಿಂಗಾಯತ ಸಮುದಾಯದ ವ್ಯಕ್ತಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೇ ಸಮತೋಲನಾಗುತ್ತದೆ ಎಂದು ಅಭಿಪ್ರಾಯ ಪಡಲಾಗಿದೆ.