ಸ್ಥಳೀಯ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ನಾವು ಸಂತಸದಿಂದ ಇದ್ದೆವು. ಅನಿತಾ ಕುಮಾರ ಸ್ವಾಮಿ ಅವರನ್ನು ಚುನಾಯಿಸುವುದು ಆಯ್ಕೆಯಲ್ಲ, ಏಕೆಂದರೇ ಅವರು ಯಾವುದೇ ಕಾರಣಕ್ಕೂ ಕ್ಷೇತ್ರದಲ್ಲಿ ಇರುವುದಿಲ್ಲ, ಎಂದು ರಾಮನಗರ ಬಿಜೆಪಿ ಪದಾಧಿಕಾರಿ ರಾಜುಕುಮಾರ್ ಗೌಡ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಇಲ್ಲಿ ಉತ್ತಮ ಬೆಂಬಲ ದೊರಕುತ್ತಿತ್ತು, ಆದರೆ ಅವರು ಚುನಾವಣೆಯನ್ನು ಧಿಕ್ಕರಿಸಿದ್ದಾರೆ ಎಂದು ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಹೇಳಿದ್ದಾರೆ.