ನಿರಾಣಿ ಸಹೋದರರ ಅಸಹಕಾರ, ಹಿಂದುತ್ವ ಅಜೆಂಡಾ ಪ್ರಮುಖ ನಾಯಕರು ಜಮಖಂಡಿಯಲ್ಲಿ ಬೃಹತ್ ರ್ಯಾಲಿ ನಡೆಸದಿರುವುದು, ಪಕ್ಷದ ಆಂತರಿಕ ಕಲಹ, ಕಾಂಗ್ರೆಸ್ ರಣ ತಂತ್ರವನ್ನು ಕಡೆಗಣಿಸಿದ್ದು ಕುಲಕರ್ಣಿ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ, ಚುನಾವಣೆಗಾಗಿ ಕಾಂಗ್ರೆಸ್ 30 ಕೋಟಿ ರು ಹಣ ಖರ್ಚು ಮಾಡಿದೆ ಎಂದು ಸೋಲಿನ ನಂತರ ಕುಲಕರ್ಣಿ ಆರೋಪಿಸಿದ್ದಾರೆ.