ಉಪಚುನಾವಣೆ ನಂತರ ವಿರಾಮಕ್ಕೆತೆರಳಿದ ಸಿಎಂ: ಕಬಿನಿ ಹಿನ್ನೀರಿನಲ್ಲಿ ಕುಟುಂಬದ ಜೊತೆ ವಾಸ್ತವ್ಯ!

ಉಪಚುನಾವಣೆ ಪ್ರಚಾರ ಕಾರ್ಯಗಳಿಂದಾಗಿ ಬಸವಳಿದಿದ್ದ ಸಿಎಂ ಕುಮಾರ ಸ್ವಾಮಿ ತಮ್ಮ ಕೆಲಸದಿಂದ ಮೂರು ದಿನ ವಿರಾಮ ಪಡೆದು ವಿಶ್ರಾಂತಿ ತೆಗೆದುಕೊಂಡಿದ್ದಾರೆ....
ಎಚ್.ಡಿ ಕುಮಾರ ಸ್ವಾಮಿ
ಎಚ್.ಡಿ ಕುಮಾರ ಸ್ವಾಮಿ
Updated on
ಮೈಸೂರು: ಉಪಚುನಾವಣೆ ಪ್ರಚಾರ ಕಾರ್ಯಗಳಿಂದಾಗಿ ಬಸವಳಿದಿದ್ದ ಸಿಎಂ ಕುಮಾರ ಸ್ವಾಮಿ ತಮ್ಮ ಕೆಲಸದಿಂದ ಮೂರು ದಿನ ವಿರಾಮ ಪಡೆದು ವಿಶ್ರಾಂತಿ ತೆಗೆದುಕೊಂಡಿದ್ದಾರೆ.
ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆಯ ಕಬಿನಿ ಹಿನ್ನೀರಿನಲ್ಲಿರುವ ಖಾಸಗಿ ರೆಸಾರ್ಟ್ ಪತ್ನಿ ಅನಿತಾ ಹಾಗೂ ಪುತ್ರ ನಿಖಿಲ್ ಜೊತೆ ಕಬಿನಿ ಹಿನ್ನೀರು ತಾಣದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ವಿಶ್ರಾಂತಿಗಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದಾರೆ.
ಕಳೆದ ಎರಡು ದಿನಗಳಿಂದ ಸಾತ್ವಿಕ ಆಹಾರ ತೆಗೆದುಕೊಳ್ಳುತ್ತಿರುವ ಕುಮಾರಸ್ವಾಮಿ, ಸಸ್ಯಾಹಾರ ಸೇವನೆ ಮಾಡುತ್ತಿದ್ದಾರೆ. ಪೊಂಗಲ್, ಇಡ್ಲಿ, ರಾಗಿ ಮುದ್ದೆ ಮತ್ತು ಸೊಪ್ಪಿನ ಸಾರು ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುತ್ತಿದ್ದಾರೆ.
ದಿನ ಬೆಳಗ್ಗೆ 40 ನಿಮಿಷಗಳ ಕಾಲ ವಾಕಿಂಗ್ ಮಾಡಿ ಸುಮಾರು 2 ಗಂಟೆಗಳ  ಕಾಲ ವೃತ್ತ ಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಓದುತ್ತಿದ್ದಾರೆ, ಜೊತೆಗೆ ಕಾದಂಬರಿಗಳನ್ನು ತೆಗೆದುಕೊಂಡು ಓದುತ್ತಿದ್ದಾರೆ.
ಪುತ್ರ ನಿಖಿಲ್ ಕೂಡ ತಮ್ಮ ಕುರುಕ್ಷೇತ್ರ ಚಿತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ. ತಮ್ಮ ಕುಟುಂಬದ ಯಾರೊಬ್ಬರಿಗೂ ಸಿಎಂ ಭೇಟಿ ಮಾಡುವ ಅವಕಾಶ ನೀಡಿಲ್ಲ,. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com