ಅನಂತ್ ಕುಮಾರ್ ಅವರ ಸಂಘಟನಾ ಕೌಶಲ್ಯ ಕುರಿತು ಹೇಳುವುದಾದರೇ, ಪ್ರತಿಯೊಂದು ಕ್ಷೇತ್ರದ ಭೌಗೋಳಿಕ ವಿಸ್ತರಣೆ, ಅದರ ಸಾಮಾಜಿಕ ಸ್ಥಾನಮಾನ, ಪಕ್ಷದ ಅಭ್ಯರ್ಥಿಗಳು, ಬಿಜೆಪಿಯೇತರ ಅಭ್ಯರ್ಥಿಗಳ ಬಗ್ಗೆಯೂ ಅವರಿಗೆ ಚೆನ್ನಾಗಿ ತಿಳಿದಿತ್ತು, ಯಾವುದೇ ಬರವಣಿಗೆಯಿಲ್ಲದೇ ಅದರ ಬಗ್ಗೆ ವಿವರಿಸುತ್ತಿದ್ದರು. ಬಿಜೆಪಿ ಒಬ್ಬ ಅಪರೂಪದ ಚುನಾವಣಾ ತಂತ್ರಗಾರನನ್ನು ಕಳೆದುಕೊಂಡಿದೆ ಎಂದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ,.