ಲಕ್ಷ್ಮಿ ಹೆಬ್ಬಾಳ್ಕರ್ ಬದಲಾವಣೆಯಿಂದಾಗಿ ಬೆಳಗಾವಿ ಲಿಂಗಾಯತ ಸಮುದಾಯ ಸ್ವಲ್ಪ ವಿಚಲಿತವಾಗುವ ಸಾಧ್ಯತೆಯಿದೆ, ಜಾರಕಿಹೊಳಿ ಸಹೋದರರ ಜೊತೆಗಿಮ ಘರ್ಷಣೆ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಹಂತಕ್ಕೂ ತಲುಪಿತ್ತು, ಇತ್ತೀಚೆಗೆ ನಡೆದ ಘಟನೆಗಳಿಗೂ ಇದಕ್ಕೂ ಸಂಬಂಧವಿಲ್ಲ, ಕಾಂಗ್ರೆಸ್ ತನ್ನ ತತ್ವಗಳನ್ನು ಹೊಂದಿದೆ, ಅವರು ಉತ್ತಮ ಕೆಲಸ ಮಾಡಿದ್ದರೂ ಅವರನ್ನು ಬದಲಾವಣೆ ಮಾಡಲಾಗುತ್ತಿದೆ, ಅವರ ವಿರುದ್ಧ ಲಾಬಿ ನಡೆಸಿದವರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಲಕ್ಷ್ಮಿ ಹೆಬ್ಬಾಳ್ಕರ್ ಲಿಂಗಾಯತ ಸಮುದಾಯದ ಪ್ರಬಲ ನಾಯಕಿಯಾಗಿದ್ದಾರೆ.