ನಾವು ಸಮಾಜ ಸೇವೆ ಮಾಡಲು ಬಂದಿಲ್ಲ, ರಾಜಕೀಯ ಮಾಡಲು ಬಂದಿದ್ದೇವೆ: ಅನಂತಕುಮಾರ್ ಹೆಗಡೆ

ನಾವು ಬಂದಿರುವುದು ಸಮಾಜ ಸೇವೆ ಮಾಡುವುದಕ್ಕೆ ಅಲ್ಲ. ಇಲ್ಲಿ ಬಂದು ಕುಳಿತಿರುವುದೇ ರಾಜಕಾರಣ ಮಾಡುವುದಕ್ಕೆ...
ಅನಂತಕುಮಾರ್ ಹೆಗಡೆ
ಅನಂತಕುಮಾರ್ ಹೆಗಡೆ
Updated on
ಶಿರಸಿ: ನಾವು ಬಂದಿರುವುದು ಸಮಾಜ ಸೇವೆ ಮಾಡುವುದಕ್ಕೆ ಅಲ್ಲ. ಇಲ್ಲಿ ಬಂದು ಕುಳಿತಿರುವುದೇ ರಾಜಕಾರಣ ಮಾಡುವುದಕ್ಕೆ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರು ಗುರುವಾರ ಹೇಳಿದ್ದಾರೆ.
ಇಂದು ಶಿರಸಿಯಲ್ಲಿ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅನಂತಕುಮಾರ್ ಹೆಗಡೆ, ನಾವು ಬಂದಿರುವುದೇ ರಾಜಕಾರಣ ಮಾಡುವುದಕ್ಕೆ. ರಾಜಕಾರಣ ಬಿಟ್ಟು ಬೇರೆನು ಮಾಡಬೇಕು. ರಾಜಕಾರಣ ಮಾಡುವುದಕ್ಕಾಗಿ ನಾವು ತಾಲೂಕು ಅಧ್ಯಕ್ಷ ಆಗಿದ್ದು, ತಾಲೂಕು ಪ್ರಮುಖ್‌ ಆಗಿದ್ದು, ಜಿಲ್ಲಾ ಪ್ರಮುಖ್‌ ಆಗಿದ್ದು. ನಾವೇನು ಇಲ್ಲಿ ಸಮಾಜ ಸೇವೆ ಮಾಡಲು ಬಂದು ಕುಳಿತಿಲ್ಲ ಎಂದರು. ಅಲ್ಲದೆ ನನ್ನ ಈ ಹೇಳಿಕೆಯನ್ನು ಮಾಧ್ಯಮದವರು ಹೇಗೆ ಬೇಕಾದರೂ ಬರೆಯಲಿ. ಅದು ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟಿದ್ದು ಎಂದರು.
ಇದಕ್ಕು ಮುನ್ನ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭವಾಗಿರುವ ಜನೌಷಧ ಕೇಂದ್ರವನ್ನು ಅನಂತಕುಮಾರ್ ಹೆಗಡೆ ಅವರು ಉದ್ಘಾಟಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com