ಆದರೆ ಯಾರೂ ಏನೇ ಹೇಳಿದರು ತಾವು ಜಗ್ಗುವುದಿಲ್ಲ ಎಂದು ಡಿಕೆಶಿ ತಮ್ಮ ಹೇಳಿಕೆಗೆ ಬದ್ದರಾಗಿದ್ದಾರೆ. ಎಂ.ಬಿ.ಪಾಟೀಲ್ ನನ್ನ ಸ್ನೇಹಿತರು, ಹಾಗೆಯೇ ಧರ್ಮದ ಬಗ್ಗೆ ಹೋರಾಟ ಮಾಡುತ್ತಿರುವವರು. ನನ್ನ ಮನಸಾಕ್ಷ್ಯಿಯಂತೆ ನಾನು ಮಾತನಾಡುತ್ತಿದ್ದೇನೆ, ನಾನು ಅವರ ವಿರುದ್ಧ ಮಾತನಾಡುತ್ತಿಲ್ಲ, ನನ್ನ ಹೇಳಿಕೆಗೆ ನಾನು ಬದ್ದನಾಗಿದ್ದೇನೆ, ರಾಜಕರಾರಣಿಗಳು ಧರ್ಮದ ವಿಷಯದಲ್ಲಿ ಮಧ್ಯಪ್ರವೇಶಿಸಬಾರದು, ನಾನು ಒಕ್ಕಲಿಗರ ಸಂಘದ ವಿಷಯದಲ್ಲೂ ಭಾಗಿಯಾಗುತ್ತಿಲ್ಲ ಎಂದು ಡಿಕೆಶಿ ಖಡಕೆ ಹೇಳಿಕೆ ನೀಡಿದ್ದಾರೆ.