ಹೆಬ್ಬಾಳ್ಕರ್ ಗುಂಪನ್ನು ಗೋವಾದ ರೆಸಾರ್ಟ್ ಗೆ ಶಿಫ್ಟ್ ಮಾಡಿರುವುದು ಉರಿವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ, ಜಾರಕಿಹೊಳಿ ಸಹೋದರರ ಪಾಲಿಗೆ ಬಿಸಿತುಪ್ಪವಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಈ ನಿಲುವು ಆಕೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಂದು ನಿಲ್ಲಿಸಲಿದೆ, ಶುಕ್ರವಾರ ಬೆಳಗ್ಗೆ 10 ಗಂಟೆಗೆ ಚುನಾವಣೆ ನಡೆಯಲಿದ್ದು, ಎಲ್ಲಾ ನಿರ್ದೇಶಕರುಗಳು ನೇರವಾಗಿ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ,15 ಜನ ನಿರ್ದೇಶಕರುಗಳ ಪೈಕಿ 9 ಮಂದಿ ತಮ್ಮ ಪರವಾಗಿದ್ದು ಇನ್ನು ಆರು ಮಂದಿ ಸತೀಶ್ ಗುಂಪಿನಲ್ಲಿದ್ದಾರೆ, ತಮಗೆ ಬಹುಮತ ಇರುವುದಾಗಿ ಹೆಬ್ಬಾಳ್ಕರ್ ಘೋಷಿಸಿದ್ದಾರೆ.