ನಾನು ಡಾಕ್ಟರ್ ,ಆದರೆ ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲ್ಲ- ಡಾ. ಸುಧಾಕರ್

ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಮತ್ತಿತರ ಶಾಸಕರ ಗುಂಪೊಂದು ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿದ್ದು, ಚೆನ್ನೈಗೆ ಹೋಗಿದೆ ಎಂಬ ಊಹಾಪೋಹಗಳಿಗೆ ಸುಧಾಕರ್ ತೆರೆ ಎಳೆದಿದ್ದಾರೆ
ರಾಹುಲ್ ಗಾಂಧಿ, ಡಾ. ಸುಧಾಕರ್
ರಾಹುಲ್ ಗಾಂಧಿ, ಡಾ. ಸುಧಾಕರ್

ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ಸಂಮ್ಮಿಶ್ರ ಸರ್ಕಾರ ಪತನಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಆಪರೇಷನ್ ಕಾರ್ಯಾಚಾರಣೆ ನಡೆಸಲು ಯತ್ನಿಸುತ್ತಿದೆ ಎಂಬ ಊಹಾಪೋಹಗಳ ನಡುವೆ   ಚಿಕ್ಕಬಳ್ಳಾಪುರ ಶಾಸಕ  ಡಾ. ಸುಧಾಕರ್ ಮತ್ತಿತರ ಶಾಸಕರ ಗುಂಪೊಂದು  ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿದ್ದು, ಚೆನ್ನೈಗೆ ಹೋಗಿದೆ ಎಂಬ ಮಾಹಿತಿ ಕೇಳಿಬಂದಿತ್ತು.

ಶಾಸಕ ಎಂ. ಟಿ. ಬಿ . ನಾಗರಾಜ್ ಮತ್ತಿತರ ಸ್ನೇಹಿತರೊಂದಿಗೆ  ಡಾ. ಸುಧಾಕರ್  ಚೆನ್ನೈಗೆ ತೆರಳಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಈ ಎಲ್ಲಾ ಊಹಾಪೋಹಗಳಿಗೆ ಡಾ. ಸುಧಾಕರ್  ತಮ್ಮ ಟ್ವೀಟರ್ ನಲ್ಲಿ ತೆರೆ ಎಳೆದಿದ್ದಾರೆ.

ಸ್ನೇಹಿತರೊಡನೆ ತಮಿಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡಿರುವುದನ್ನೇ ರಾಜಕೀಯ ಪಿತ್ತೂರಿ ಎಂಬರ್ಥದಲ್ಲಿ ಮಾತನಾಡುತ್ತಿರುವುದು ತಮ್ಮಗೆ ದಿಗ್ರ್ಬಮೆ ಮೂಡಿಸಿದೆ. ನಾನು ಡಾಕ್ಟರ್, ಆದರೆ ಯಾವುದೇ ಆಪರೇಷನ್ ಕಾರ್ಯಗಳಲ್ಲಿ ಪಾಲ್ಗೊಳ್ಳಲ್ಲ. ನಾನು ಯಾವಾಗಲೂ ಕಾಂಗ್ರೆಸ್  ಪಕ್ಷದಲ್ಲಿಯೇ ಇರುತ್ತೇನೆ. ಕಾಂಗ್ರೆಸ್ ಪಕ್ಷದ ತತ್ವ ಆದರ್ಶ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಲ್ಲಿ ದೃಢ ನಂಬಿಕೆ ಹೊಂದಿರುವುದಾಗಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com