ರಮೇಶ್ ಗೌಡ ನಾಮಪತ್ರ ಸಲ್ಲಿಕೆ ನನಗೆ ಬೇಸರ ತಂದಿದೆ,. ಆದರೆ ಪಕ್ಷದ ಹಿರಿಯ ನಾಯಕರ ಮನವಿ ಮೇರೆಗೆ ನಾನು ಪಕ್ಷ ತೊರೆಯುತ್ತಿಲ್ಲ, ಪಕ್ಷ ಹೊಸ ತೊಂದರೆಗೆ ಸಿಲುಕಬಾರದು ಎಂಬ ಉದ್ದೇಶದಿಂದ ನಾನು ಸುಮ್ಮನಿದ್ದೇನೆ, ನನ್ನ ಕಠಿಣ ಶ್ರಮಕ್ಕೆ ತಕ್ಕ ಫಲ ಸಿಗುವುದೆಂಬ ನಿರೀಕ್ಷೆಯೊಂದಿಗೆ ಕಾಯುತ್ತಿದ್ದೇನೆ ಎಂದು ಎಂಎಲ್ ಸಿ ಸ್ಥಾನದ ಆಕಾಂಕ್ಷಿಯಾಗಿದ್ದ ಬೆಂಗಳೂರು ಜೆಡಿಎಸ್ ಘಟಕದ ಅಧ್ಯಕ್ಷ ಪ್ರಕಾಶ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.