'ಕಾಫಿ ಕುಡಿಯಲು ಕರೆದುಕೊಂಡು ಹೋಗಿ ಬಿಜೆಪಿ ಸೇರಿಸಿಬಿಟ್ರು'

ಉಪಚುನಾವಣೆ  ಹೊತ್ತಲ್ಲೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಬಿಬಿಎಂಪಿ ಕಾರ್ಪೊರೇಟರ್​​ ವಸಂತ್​ಕುಮಾರ್​ ಇಂದು ಮತ್ತೆ ಮಾತೃ ಪಕ್ಷಕ್ಕೆ ವಾಪಸ್ಸಾಗಿದ್ದಾರೆ. 
ವಸಂತ್ ಕುಮಾರ್ ಸುದ್ದಿಗೋಷ್ಟಿ
ವಸಂತ್ ಕುಮಾರ್ ಸುದ್ದಿಗೋಷ್ಟಿ
Updated on

ಬೆಂಗಳೂರು: ಉಪಚುನಾವಣೆ  ಹೊತ್ತಲ್ಲೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಬಿಬಿಎಂಪಿ ಕಾರ್ಪೊರೇಟರ್​​ ವಸಂತ್​ಕುಮಾರ್​ ಇಂದು ಮತ್ತೆ ಮಾತೃ ಪಕ್ಷಕ್ಕೆ ವಾಪಸ್ಸಾಗಿದ್ದಾರೆ. 

ತಾವು ಮಾತೃಪಕ್ಷಕ್ಕೆ ವಾಪಾಸಾದ ಹಿನ್ನೆಲೆಯಲ್ಲಿ ಮಾತನಾಡಿದ ಅವರು,  ನನ್ನನ್ನು ಕಾಫಿ ಕುಡಿಯಲು ಕರೆದು ಕೊಂಡು ಹೋಗಿ ಬಿಜೆಪಿ ಸೇರಿಸಿಕೊಂಡಿದ್ದರು. ಆ ಸಮಯದಲ್ಲಿ ನನಗೆ ಏನೂ ಮಾಡಲು ತೋಚಲಿಲ್ಲ. ನನ್ನಿಂದ ತಪ್ಪಾಗಿದೆ. ಅಧ್ಯಕ್ಷರಿಗೆ ತಿಳಿಸಿ, ಈಗ ಪಕ್ಷಕ್ಕೆ ವಾಪಸ್​ ಬಂದಿದ್ದೇನೆ ಎಂದು ಕಾರ್ಪೊರೇಟರ್​ ವಸಂತ್​ಕುಮಾರ್​ ಕ್ಷಮೆ ಯಾಚಿಸಿದ್ದಾರೆ.

ಹಣ ಪಡೆದು ಬಿಜೆಪಿ ಸೇರಿದ್ದು, ಈಗ ಮತ್ತೆ ಹಣ ಪಡೆದು ಕಾಂಗ್ರೆಸ್​​ಗೆ ಬಂದೆ ಎಂಬುದು ಸುಳ್ಳು ​ ಸ್ಪಷ್ಟನೆ ನೀಡಿದ್ದಾರೆ.

ಶಿವಾಜಿನಗರ ಕ್ಷೇತ್ರದಲ್ಲಿ ಸೋಲುವ ಭಯದಿಂದ ಹೀಗೆ ಮಾಡಿದ್ದಾರೆ. ಬಿಜೆಪಿಯ ಈ ರೀತಿಯ ಕೀಳು ಮಟ್ಟದ ರಾಜಕಾರಣವನ್ನು ನಾನು ಖಂಡಿಸುತ್ತೇನೆ. ಗೆಲ್ಲಲು ವಾಮ ಮಾರ್ಗ ಅನುಸರಿಸುತ್ತಿದ್ದಾರೆ.  ಒತ್ತಡ ಹೇರಿ ಕರೆದುಕೊಂಡು ಹೋಗಿದ್ದರು, ಆದರೆ ಈಗ ವಸಂತ್ ಮತ್ತೆ ವಾಪಸ್ಸಾಗಿದ್ದಾರೆ.  ಬಿಜೆಪಿಯದ್ದು ಇದು ಹಳೇ ಚಾಳಿ, ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com