ಜನವರಿ 18 ರಂದು ನಡೆದ ಶಾಸಕಾಂಗ ಸಭೆಗೆ ನಾಲ್ವರು ಶಾಸಕರು ಗೈರು ಹಾಜರಾಗಿದ್ದರು. ಈ ಸಂಬಂಧ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಾಲ್ವರು ಶಾಸಕರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿದ್ದರು. ನಾಲ್ವರು ಶಾಸಕರು ನೋಟೀಸಿಗೆ ಉತ್ತರ ನೀಡಿದ್ದರು. ಆದರೆ ಶೋಕಾಸ್ ನೊಟೀಸಿಗೆ ಉತ್ತರ ನೀಡಿದ ಬಳಿಕ ಮತ್ತೆ ಕೆಪಿಸಿಸಿ ಅಧ್ಯಕ್ಷರು ನಾಲ್ವರು ಶಾಸಕರಿಗೆ ನೊಟೀಸ್ ಜಾರಿ ಮಾಡಿ ಶಾಸಕಾಂಗ ನಾಯಕ ಸಿದ್ದರಾಮಯ್ಯ ಮುಂದೆ ಖುದ್ದಾಗಿ ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದ್ದರು. ಆದರೆ ಇದುವರೆಗೂ ನಾಲ್ವರು ಶಾಸಕರು ಸಿದ್ದರಾಮಯ್ಯ ಮುಂದೆ ಹಾಜರಾಗಿಲ್ಲ.