ಬೆಂಗಳೂರಿನಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಮಿಟ್ ಕಲ್ ಶಾಸಕ ನಾಗನಗೌಡ ಅವರ ಪುತ್ರ, ನಿನ್ನೆ ರಾತ್ರಿ 11.30ಕ್ಕೆ ನನಗೊಂದು ಕರೆ ಬಂದಿತ್ತು, ಆ ಕಡೆಯಿಂದ ಯಡಿಯೂರಪ್ಪ ಮಾತನಾಡಿ, ತಮಗೆ ದೇವದುರ್ಗದ ಸರ್ಕ್ಯೂಟ್ ಹೌಸ್ ಗೆ ಬರಲು ಹೇಳಿದರು, ನಾನು ಅಲ್ಲಿಗೆ ತೆರಳಿದೆ, ಅಲ್ಲಿ ಹಾಸನ ಶಾಸಕ ಪ್ರೀತಂ ಗೌಡ ಮತ್ತು ಒಬ್ಬ ಪತ್ರಕರ್ತ ಇದ್ದರು ಎಂದು ಹೇಳಿದ್ದಾರೆ.