ಶನಿವಾರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಜಯಪುರಕ್ಕೆ ತೆರಳಲಿದ್ದು ಅವರು ಈ ಸಮಸ್ಯೆಯನ್ನು ಬಗೆಹರಿಸುವ ವಿಶ್ವಾಸ ಪಕ್ಷದಲ್ಲಿದೆ. ಪತ್ರಿಕೆಯೊಡನೆ ಮ್,ಆತನಾಡಿದ ವಿಜಯಪುರ ಕ್ಷೇತ್ರದ ಉಸ್ತುವಾರಿ ಎಮ್ಎಲ್ಸಿ ಅರುಣ್ ಶಹಾಪುರ್ "ಪಕ್ಷದ ಹೈಕಮಾಂಡ್ ಲೋಕಸಭೆಗೆ ಯಾರು ನಿಲ್ಲಬೇಕು ಎನ್ನುವುದನ್ನು ನಿರ್ಧರಿಸಲಿದೆ. ಒಂದು ವೇಳೆ ಜಿಗಜಿಣಗಿ ಪಕ್ಷದ ಅಭ್ಯರ್ಥಿಯಾಗಿ ಘೋಷಿತವಾದರೆ ಯತ್ನಾಳ್ ಸೇರಿ ಎಲ್ಲಾ ಜಿಲ್ಲಾ ನಾಯಕರು ಪಕ್ಷದ ಪರ ಪ್ರಚಾರ ಕೈಗೊಳ್ಳಬೇಕು.ಅಲ್ಲದೆ ಯತ್ನಾಳ್ ಅವರ ಸಾಮಾಜಿಕ ತಾಣಗಳ ಬರಹಗಳಿಗೆ ಯಾವ ದೃಢೀಕರಣ ನೀಡಲು ಬರುವುದಿಲ್ಲ.ನಾವೆಲ್ಲಾ ಒಗ್ಗಟ್ತಾಗಿದ್ದೇವೆ, ನಮ್ಮಲ್ಲಿನ ಸಾಮರಸ್ಯವನ್ನು ಕದಡಲು ಸಾಧ್ಯವಿಲ್ಲ" ಎಂದಿದ್ದಾರೆ.