ದಲಿತರಿಗೆ ಸಿಎಂ ಪಟ್ಟ: ಪರಮೇಶ್ವರ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು

ನನಗೆ ಮೂರು ಬಾರಿ ಸಿಎಂ ಆಗುವ ಅವಕಾಶ ಕೈತಪ್ಪಿದೆ, ಈಗ ಬೇಡದಿದ್ರೂ ಡಿಸಿಎಂ ಆಗಿ ಕೂರಿಸಿದ್ದಾರೆ ಎಂದು "ದಲಿತ ಸಿಎಂ" ವಿಚಾರವನ್ನು ಮತ್ತೆ ಮಾತನಾಡಿದ್ದ....
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on
ಬೆಂಗಳೂರು: ನನಗೆ ಮೂರು ಬಾರಿ ಸಿಎಂ ಆಗುವ ಅವಕಾಶ ಕೈತಪ್ಪಿದೆ, ಈಗ ಬೇಡದಿದ್ರೂ ಡಿಸಿಎಂ ಆಗಿ ಕೂರಿಸಿದ್ದಾರೆ ಎಂದು "ದಲಿತ ಸಿಎಂ" ವಿಚಾರವನ್ನು ಮತ್ತೆ ಮಾತನಾಡಿದ್ದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರ ಮಾತುಗಳುಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಯಿಸಿದ್ದಾರೆ. 
"ದಲಿತರು, ನಿರ್ಲಜ್ಕ್ಷಕ್ಕೊಳಗಾದವರಿಗೆ ನಿಜಿವಾದ ಕಾಳಜಿ ತೋರುತ್ತಿರುವ ಏಕೈಕ ಪಕ್ಷ ಕಾಂಗ್ರೆಸ್ ಮಾತ್ರವೇ. ಆದರೆ ಪರಮೇಶ್ವರ ಅವರು ಯಾವ ಅರ್ಥದಲ್ಲಿ ಈ ಮಾತನ್ನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಇದನ್ನು ಅವರ ಬಳಿಯೇ ಕೇಳಬೇಕು" ಸಿದ್ದರಾಮಯ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಡಿಸಿಎಂ ಪರಮೇಶ್ವರ ರಾಜ್ಯದಲ್ಲಿ ಇದುವರೆಗೆ ದಲಿತರಿಗೆ ಸಿಎಂ ಆಗುವ ಅವಕಾಶ ಸಿಕ್ಕಿಲ್ಲ. ನನಗೆ ದಲಿತನಾಗಿರುವ ಕಾರಣ ಮೂರು ಬಾರಿ ಸಿಎಂ ಆಗುವ ಅವಕಾಶ ಕೈಬಿಟ್ಟಿದೆ." ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com