ತನ್ನ ಶಾಸಕರ ಮೇಲೆ ಬಿಜೆಪಿಗೆ ನಂಬಿಕೆಯಿಲ್ಲ: ಕುಮಾರಸ್ವಾಮಿ ಟಾಂಗ್

ನಾನು ನನ್ನ ಕುಟುಂಬದ ಜೊತೆ ಹೊಸ ವರ್ಷ ಆಚರಣೆಗಾಗಿ ಮೂರು ದಿನ ಹೊರ ದೇಶಕ್ಕೆ ಹೋಗಿದ್ದಾಗ ಬಿಜೆಪಿಯವರು ದೊಡ್ಡ ಪ್ರಕರಣ ಮಾಡಿದ್ದರು...
ಕುಮಾರಸ್ವಾಮಿ
ಕುಮಾರಸ್ವಾಮಿ
ಬೆಂಗಳೂರು: ನಾನು ನನ್ನ ಕುಟುಂಬದ ಜೊತೆ ಹೊಸ ವರ್ಷ ಆಚರಣೆಗಾಗಿ ಮೂರು ದಿನ ಹೊರ ದೇಶಕ್ಕೆ ಹೋಗಿದ್ದಾಗ ಬಿಜೆಪಿಯವರು ದೊಡ್ಡ ಪ್ರಕರಣ ಮಾಡಿದ್ದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಸಿಎಂ ವಿದೇಶ ಪ್ರವಾಸಕ್ಕೆ ತೆರಳಿದ್ದರು ಎಂದು ದೂರಿದ್ದರು. ಆದರೆ ಈಗ ಬಿಜೆಪಿಯವರು ಮಾಡುತ್ತಿರುವುದು ಏನು ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕಳೆದ ಆರು ದಿನಗಳಿಂದ ಬಿಜೆಪಿ ಶಾಸಕರು ಗುರುಗ್ರಾಮದಲ್ಲಿ ಏನು ಮಾಡುತ್ತಿದ್ದಾರೆ, ಆ ಶಾಸಕರ ಕ್ಷೇತ್ರದಲ್ಲಿ  ಬರ ಪರಿಸ್ಥಿತಿ ಇದ್ದರೂ ಅಲಿಲ ಹೋಗಿ ಏನು ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪನವರನ್ನು ಸಿಎಂ ಪ್ರಶ್ನಿಸಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ಪಡುತ್ತಲೇ ಇದೆ.ಜೆಡಿಎಸ್ ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಹೇಳಿಕೆ ಕೇಳಿ ನನಗೆ ಅಚ್ಚರಿಯಾಗಿದೆ, ಅವರ ಶಾಸಕರ ಮೇಲೆ ಅವರಿಗೆ ನಂಬಿಕೆಯಿಲ್ಲ, 
ರೆಸಾರ್ಟ್ ನಲ್ಲಿ ತಂಗಿರುವ ಶಾಸಕರ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ, ಶಾಸಕರನ್ನು ಏಕೆ  ಹೋಟೆಲ್ ನಲ್ಲಿ ಲಾಕ್ ಮಾಡಲಾಗಿದೆ, ನಮ್ಮ ಶಾಸಕರಿಗೆ ನಾವು ಯಾವತ್ತೂ ಆ ರೀತಿ ಮಾಡಿಲ್ಲ ಎಂದು ಸಿಎಂ ವ್ಯಂಗ್ಯವಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com