ಆಪರೇಷನ್ ಕಮಲದ ಭೀತಿಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಶಾಸಕರನ್ನು ಬಿಡದಿಯಲ್ಲಿನ ಈಗಲ್ಟನ್ ರೆಸಾರ್ಟ್ಗೆ ಜನವರಿ 19ರಂದು ಕರೆದೊಯ್ದಿತ್ತು. ಅದೇ ದಿನ ರಾತ್ರಿ ಶಾಸಕರ ಮಧ್ಯೆ ಮಾರಾಮಾರಿ ನಡೆದಿದೆ. ಆನಂದ್ ಸಿಂಗ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾದರು. ಅವರ ತಲೆ, ಕಣ್ಣು ಮತ್ತು ಎದೆ ಭಾಗಕ್ಕೆ ತೀವ್ರ ಪೆಟ್ಟುಬಿದ್ದಿರುವುದು ತಿಳಿದುಬಂದಿದೆ.