ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗಾಗಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ನಲ್ಲಿ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು ಟಿಕೆಟ್ ಪಡೆಯಲು ಇವರ ನಡುವೆಯೇ ತೀವ್ರ ಸ್ಪರ್ಧೆಇರಲಿದೆ ಎನ್ನಲಾಗಿದೆ.ಇನ್ನು ಕೈ ಪಕ್ಷ ಈಗಾಗಲೇ ತನ್ನ ಶಾಸಕರಿಂದ ಅಭಿಪ್ರಾಯಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ,ಪಕ್ಷದ ನಾಯಕರ ಪ್ರಕಾರ, ರಿಜ್ವಾನ್ ಅರ್ಷದ್, ರೋಶನ್ ಬೇಗ್, ಎಚ್ ಟಿ ಸಾಂಗ್ಲಿಯಾನಾ, ಸಲೀಮ್ ಅಹ್ಮದ್, ಬಿ ಕೆ ಹರಿಪ್ರಸಾದ್ ಮತ್ತು ಜೆ. ಅಲೆಕ್ಸಾಂಡರ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.