ಮೈತ್ರಿ ಪಕ್ಷದ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಕನಕಪುರದ ನಿವಾಸದಲ್ಲಿ ದಿಡೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಸುಭದ್ರವಾಗಿ ಇರಲಿದೆ. ಯಾವುದೇ ಅತೃಪ್ತಿ ಇದ್ದರು ಸರಿ ಮಾಡುತ್ತೇವೆ. ಇಂದಿನ ನನ್ನ ಪ್ರವಾಸ ರದ್ದು ಮಾಡಿ ಬೆಂಗಳೂರಿಗೆ ಹೋಗುತ್ತಿದ್ದೇನೆ. ಸಂಜೆ ಬೆಂಗಳೂರಿನ ಎಲ್ಲ ಶಾಸಕರನ್ನು, ಕೆಲ ಕಾರ್ಪೋರೇಟರ್ಗಳನ್ನು ಪಕ್ಷದ ಪ್ರಮುಖರ ಜತೆ ಮಾತನಾಡಲಿದ್ದೇನೆ ಎಂದು ಹೇಳಿದರು.