ಉಪಹಾರ ಸಭೆಗೆ ಗೈರಾದ ಸಚಿವ ಎಂಟಿಬಿ ನಾಗರಾಜ್ ಗೆ ಸಿದ್ದರಾಮಯ್ಯ ತರಾಟೆ

ರಾಜ್ಯ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನಿವಾಸದಲ್ಲಿ ಆಯೋಜಿಸಲಾಗಿದ್ದ ಉಪಹಾರ ಕೂಟದಿಂದ ವಸತಿ ಸಚಿವ ಎಂ ಟಿಬಿ ನಾಗರಾಜ್ ಸೇರಿದಂತೆ ನಾಲ್ವರು ಸಚಿವರು ದೂರ ಉಳಿದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನಿವಾಸದಲ್ಲಿ ಆಯೋಜಿಸಲಾಗಿದ್ದ ಉಪಹಾರ ಕೂಟದಿಂದ ವಸತಿ ಸಚಿವ ಎಂ ಟಿಬಿ ನಾಗರಾಜ್ ಸೇರಿದಂತೆ ನಾಲ್ವರು ಸಚಿವರು ದೂರ ಉಳಿದಿದ್ದಾರೆ.
ಈ ಮಾಹಿತಿ ತಿಳಿದು ಅಸಮಾಧಾನಗೊಂಡ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಎಂಬಿಟಿ ನಾಗರಾಜ್ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ. ಅಲ್ಲದೇ ಅಲ್ಲದೇ ಪೋನ್ ಮಾಡುವ ಮೂಲಕ ಎಲ್ಲೇ ಇದ್ದರೂ ಉಪಹಾರ ಕೂಟಕ್ಕೆ ಆಗಮಿಸುವಂತೆ ಕಟ್ಟಪ್ಪಣೆ ಮಾಡಿದ್ದಾರೆ.
 ಪೂರ್ವನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಉಪಹಾರ ಕೂಟಕ್ಕೆ ಆಗಮಿಸಲು ಆಗಲಿಲ್ಲ ಎಂದು ಎಂಟಿಬಿ ನಾಗರಾಜ್  ಸಮಾಜಾಯಿಸಿ ನೀಡಿದ್ದಾರೆ.
ಈ ಉಪಹಾರ ಕೂಟದಲ್ಲಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಸಚಿವರು ರಾಜೀನಾಮೆ ನೀಡಲು ಒಪ್ಪಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com