ದೇವೇಗೌಡರ ಕುಟುಂಬಕ್ಕೆ 9 ಸಂಖ್ಯೆ ಕಂಟಕ, ರೇವಣ್ಣನ ನಿಂಬೆ ಹಣ್ಣಿಗೆ ಬೆಲೆ ಇಲ್ಲ: ಎ.ಮಂಜು

: ಜೆಡಿಎಸ್ ಹಿರಿಯ ನಾಯಕ ಹೆಚ್ ಡಿ ರೇವಣ್ಣ ಅವರು ಮಡಿಯಿಂದ ಬರಿಗಾಲದಲ್ಲಿ ಸಲ್ಲಿಸಿದ ಪೂಜೆ, ನಿಂಬೆಹಣ್ಣನ ಮಂತ್ರಕ್ಕೆ ಯಾವುದೇ ಫಲ ಸಿಕ್ಕಿಲ್ಲ. ರೇವಣ್ಣನ ..
ಎ.ಮಂಜು
ಎ.ಮಂಜು
Updated on
ಮೈಸೂರು: ಜೆಡಿಎಸ್ ಹಿರಿಯ ನಾಯಕ ಹೆಚ್ ಡಿ ರೇವಣ್ಣ ಅವರು ಮಡಿಯಿಂದ ಬರಿಗಾಲದಲ್ಲಿ ಸಲ್ಲಿಸಿದ ಪೂಜೆ, ನಿಂಬೆಹಣ್ಣನ ಮಂತ್ರಕ್ಕೆ ಯಾವುದೇ ಫಲ ಸಿಕ್ಕಿಲ್ಲ. ರೇವಣ್ಣನ ನಿಂಬೆ ಹಣ್ಣಿಗೆ ಬೆಲೆ ಸಿಗಲಿಲ್ಲ ಎಂದು ಮಾಜಿ ಸಚಿವ ಎ.ಮಂಜು ವ್ಯಂಗ್ಯವಾಡಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರ ಪ್ರಯತ್ನಕ್ಕೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಅವರ ಪೂಜಾ ಫಲ ಫಲಿಸಿಲ್ಲ. ಪೂಜೆ ಮಾಡಿದ ಮಾತ್ರಕ್ಕೆ ರಾಜಕಾರಣದಲ್ಲಿ ಬದಲಾವಣೆಯಾಗುತ್ತದೆ ಎಂಬುದು ಅವರ ಭ್ರಮೆ ಎಂದು ಟೀಕಿಸಿದ್ದಾರೆ.
ಮಂಗಳವಾರವು ವಿಧಾನಸಭೆ ಕಲಾಪ ಮುಂದೂಡಿಕೆ ಆದರೆ ಒಳ್ಳೆಯದಾಗುತ್ತದೆ ಅಂದುಕೊಂಡಿದ್ದರು. ಇದಕ್ಕಾಗಿ ರೇವಣ್ಣ ಮಂಗಳವಾರದವರೆಗೂ ವಿಶ್ವಾಸ ನಿರ್ಣಯ ಮುಂದೂಡಿದ್ದರು. ಅವರ ನಿಂಬೆ ಹಣ್ಣಿಗೆ, ಪೂಜೆಗೆ ಇದೀಗ ತಕ್ಕ ಉತ್ತರ ಸಿಕ್ಕಿದೆ ಎಂದು ಅವರು ಕುಟುಕಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ 9ರ ಸಂಖ್ಯೆ ಅದೃಷ್ಟವಿಲ್ಲ. 1999, 2009 ಹಾಗೂ 2019ರಲ್ಲಿ ಅವರು ಕಂಡ ಸೋಲೆ ಇದಕ್ಕೆ ಪ್ರಮುಖ ಸಾಕ್ಷಿ. ಈ ಹಿಂದೆಯೇ ಹೇಳಿದ್ದೆ 9 ಸಂಖ್ಯೆ ದೇವೇಗೌಡರಿಗೆ ಕೈಗೆಟಕುವುದಿಲ್ಲ ಎಂದು, ಈಗ ಮತ್ತೊಮ್ಮೆ ದೇವೇಗೌಡರ ವಿಷಯದಲ್ಲಿ ಇದು ನಿಜವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com