ಜನತೆಗೆ ಒಳ್ಳೆಯದಾಗುವುದಾದರೇ ನಾನು ನೀರುಗಂಟಿ ಕೆಲಸ ಮಾಡಲೂ ಸಿದ್ಧ: ಜಿಎಸ್ ಬಸವರಾಜು

ನೀರುಗಂಟಿ ಕೆಲಸ ಮಾಡುವುದು ದೇಶ ಸೇವೆಯೇ ಆಗಿದೆ ಎಂದು ತುಮಕೂರು ಸಂಸದ ಜಿ ಎಸ್ ಬಸವರಾಜ್ ಅವರು ಸಚಿವರಾದ ಎಚ್ ಡಿ ರೇವಣ್ಣ, ...
ಜಿ.ಎಸ್ ಬಸವರಾಜು
ಜಿ.ಎಸ್ ಬಸವರಾಜು
Updated on
ಬೆಂಗಳೂರು: ನೀರುಗಂಟಿ ಕೆಲಸ ಮಾಡುವುದು ದೇಶ ಸೇವೆಯೇ ಆಗಿದೆ ಎಂದು ತುಮಕೂರು ಸಂಸದ ಜಿ ಎಸ್ ಬಸವರಾಜ್ ಅವರು ಸಚಿವರಾದ ಎಚ್ ಡಿ ರೇವಣ್ಣ, ಶ್ರೀನಿವಾಸ್ ಅವರಿಗೆ ಟಾಂಗ್ ನೀಡಿದ್ದಾರೆ.
ಸಚಿವರು ಗೋರೂರು ಜಲಾಶಯದ ಕೀಲಿಕೊಟ್ಟರೆ ಪ್ರಧಾನಿ ಮೋದಿಯಂತೆ ನಾನೂ ಕಾವಲುಗಾರನಾಗಿ ನೀರುಗಂಟಿಯ ಕೆಲಸ ಮಾಡಲು ಸಿದ್ಧ, ಈ ಕೆಲಸ ಮಾಡಲು ನನಗೆ ಯಾವುದೇ ಮುಜುಗರವಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಜನತೆಗೆ ಒಳ್ಳೆಯದಾಗಲಿದೆ ಅಂದರೆ ನಾನು ನೀರುಗಂಟಿಯ ಕೆಲಸ ಮಾಡಲೂ ಸಿದ್ಧನಿದ್ದೇನೆ ಎಂದು ಸಚಿವರಾದ ರೇವಣ್ಣ ಹಾಗೂ ಎಸ್ ಆರ್ ಶ್ರೀನಿವಾಸ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಬಸವರಾಜು ಸಂಸದರಾಗಲೂ ಯೋಗ್ಯರಾಗಿಲ್ಲ, ಅವರಿಗೆ ಹೇಮಾವತಿ ಜಲಾಶಯದ ಕೀ ಕೊಡುವುದಾಗಿ ಸಚಿವ ರೇವಣ್ಣ ವ್ಯಂಗ್ಯವಾಡಿದ್ದರು, ಇದಕ್ಕೆ ಬಸವರಾಜ್ ಅವರು ಈ ಮೂಲಕ ತಿರುಗೇಟು ನೀಡಿದ್ದಾರೆ..
17 ಟಿಎಂಸಿ ಬದಲಿಗೆ 45 ಟಿಎಂಸಿ ನೀರನ್ನೂ ಉಪಯೋಗಮಾಡಿಕೊಂಡು ಎಲ್ಲರಿಗೂ ನಾಮ ಹಾಕಿ ನಾಲೆ ಒಡೆಯುವಂಥವರಿಗೆ ನಾವು ಬಲಿಯಾಗುವುದಿಲ್ಲ ಎಂದು ಪರೋಕ್ಷವಾಗಿ ಬಸವರಾಜು ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com