ನಾವು ಬಳ್ಳಾರಿ ಸ್ಥಳೀಯ ಶಾಸಕರಾಗಿದ್ದು, ಇಲ್ಲಿನ ಜನರ ಒತ್ತಾಸೆಯ ಮೇರೆಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಸರ್ಕಾರದ ನಿರ್ಧಾರಕ್ಕಾಗಲಿ, ಸಂಸ್ಥೆಯ ವಿರುದ್ಧವಾಗಲಿ ನಾವಿಲ್ಲ. ಜನರ ಪರವಾಗಿ ನಾವಿದ್ದೇವೆ. ಸರ್ಕಾರ ಜನರ ಆಶಯದಂತೆ ನಡೆದುಕೊಳ್ಳಬೇಕು. ಪೊಲೀಸರು, ಅಧಿಕಾರಿಗಳು ಜಿಂದಾಲ್ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.