ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಕ್ಷಣಕ್ಕೆ ಯಾರಿಗೂ ಚುನಾವಣೆ ಅವಶ್ಯಕತೆ ಇಲ್ಲ. ಆದರೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆಂದರೇ ಸತ್ಯ ಇದೆ ಅನ್ನಿಸುತ್ತದೆ. ಚುನಾವಣೆಗೆ ಹೋಗುವ ವಾತಾವರಣ ನಮಗೆ ಕಂಡು ಬರುತ್ತಿಲ್ಲ, ಆದರೂ ದೇವೇಗೌಡರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ಪಕ್ಷಗಳು ಈಗ ಅಭಿವೃದ್ಧಿ ಬಿಟ್ಟು ರಾಜಕೀಯ ವಿಚಾರದಲ್ಲಿ ತೊಡಗಿಕೊಂಡಿವೆ ಎಂದರು.