ಮೈಸೂರಲ್ಲಿ ನಡೆದ ಸಮಾವೇಶ ಮಾತನಾಡಿದ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ, ದೇವೇಗೌಡರ ಕುಟುಂಬದ್ದು ಪ್ರೈವೇಟ್ ಲಿಮಿಟೆಡ್ ಕಂಪನಿ ಇದ್ದಂತೆ. ವೇದಿಕೆ ಮೇಲಿರುವ ಸಂಸದ ಪ್ರತಾಪ ಸಿಂಹ, ಶಾಸಕ ನಾಗೇಂದ್ರ, ನಾನೂ ಗೌಡರೇ. ನಾವೇನು ಪಾಕಿಸ್ತಾನ, ಆಘಾನಿಸ್ತಾನದಿಂದ ಬಂದಿದ್ದೇವೆಯೇ? ದೇವೇಗೌಡರು ತಮ್ಮ ಕುಟುಂಬಕ್ಕೆ ಕ್ಷೇತ್ರವನ್ನು ಹಂಚಿಕೊಡುತ್ತಿದ್ದಾರೆ. ಕರ್ನಾಟಕವೇನು ದೇವೇಗೌಡರ ಅಪ್ಪನ ಮನೆ ಆಸ್ತೀನಾ? ಒಕ್ಕಲಿಗರಾರು ದೇವೇಗೌಡರಿಗೆ ಜಿಪಿಎ ಬರೆದುಕೊಟ್ಟಿಲ್ಲ ಎಂದು ಹರಿಹಾಯ್ದಿದ್ದಾರೆ.