ಮಂಡ್ಯದಲ್ಲಿ ಮಾತನಾಡಿದ ಅವರು, ಜನಗಳ ಬಗ್ಗೆ ಸುಮಲತಾ ಎಷ್ಟು ಕಾಳಜಿ ವಹಿಸಿದ್ದಾರೆ ಎಂದು ಪ್ರಶ್ನಿಸಿರುವ ತಮ್ಮಣ್ಣ, ಅಂಬರೀಷ್ ಹೆಸರು ಹೇಳಿಕೊಂಡು ಏನೋ ಮಾಡುತ್ತೀನೆ ಎಂದು ಹೊರಟಿದ್ದಾರೆ, ಈ ಹಿಂದೆಯೂ ಒಬ್ಬ ಹೆಣ್ಣು ಮಗಳು ಬಂದು ಹೋದಳು ಎಂದು ರಮ್ಯಾ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ ತಮ್ಮಣ್ಣ ಬಣ್ಣ ಬಣ್ಣದ ಮಾತುಗಳನ್ನು ಹೇಳುವ ಜನರನ್ನು ನಂಬಬೇಡಿ, ಅವರನ್ನು ನಂಬಿ ಆಯ್ಕೋ ಮಾಡಿದರೇ ಸರ್ವನಾಶ, ಹೀಗಾಗಿ ರೈತನ ಮಗ ನಿಖಿಲ್ ಅವರನ್ನು ಈ ಬಾರಿ ಗೆಲ್ಲಿಸಿ, ಅವರಿಗೆ ಸಮಾಜದ ಹಿತದ ಬಗ್ಗೆ ಚಿಂತಿಯಿದೆ ಮಂಡ್ಯ ಜನರಲ್ಲಿ ಮನವಿ ಮಾಡಿದ್ದಾರೆ.