ಸಾರಥಿ ಮತ್ತು ರಾಕಿ ಬಾಯ್ ನನ್ನ ಜೊತೆಗಿದ್ದಾರೆ- ಸುಮಲತಾ: ಮಂಡ್ಯದಲ್ಲಿ ಶುರುವಾಯ್ತು ಸ್ಟಾರ್ ವಾರ್!

ಸ್ಯಾಂಡಲ್ ವುಡ್ ಸ್ಟಾರ್ ಗಳಾದ ದರ್ಶನ್ ಮತ್ತು ಯಶ್ ಅವರ ಎಂಟ್ರಿಯಿಂದಾಗಿ ಮಂಡ್ಯ ಲೋಕಸಬೆ ಚುನಾವಣಾ ಕಣ ಮತ್ತಷ್ಟು ರಂಗೇರಿದೆ....
ಸುದ್ದಿಗೋಷ್ಠಿಯಲ್ಲಿ ಸುಮಲತಾ ಜೊತೆ ಯಶ್ ಮತ್ತು ದರ್ಶನ್
ಸುದ್ದಿಗೋಷ್ಠಿಯಲ್ಲಿ ಸುಮಲತಾ ಜೊತೆ ಯಶ್ ಮತ್ತು ದರ್ಶನ್
Updated on
ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಗಳಾದ ದರ್ಶನ್ ಮತ್ತು ಯಶ್ ಅವರ ಎಂಟ್ರಿಯಿಂದಾಗಿ ಮಂಡ್ಯ ಲೋಕಸಬೆ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.
ಮಂಡ್ಯದಿಂದ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಸುಮಲತಾ ಘೋಷಿಸಿದ್ದಾರೆ, ಸುಮಲತಾ ಸುದ್ದಿಗೋಷ್ಠಿ ವೇಳೆ, ಸ್ಯಾಂಡಲ್ ವುಡ್ ನಟರಾದ ದರ್ಶನ್ ತೂಗುದೀಪ್ ಮತ್ತು ಯಶ್ ಹಾಜರಿದ್ದರು. 
ನಿಖಿಲ್ ಕುಮಾರಸ್ವಾಮಿ ಕೂಡ ನಟರಾಗಿದ್ದಾರೆ, ಸುಮಲತಾ ಅಂಬರೀಷ್ ಪರವಾಗಿ ಅಂಬರೀಷ್ ಅಭಿಮಾನಿಗಳು ಪ್ರಚಾರ ನಡೆಸುತ್ತಿದ್ದಾರೆ, ಹೀಗಾಗಿ ಮಂಡ್ಯದಲ್ಲಿ ಸ್ಟಾರ್ ವಾರ್ ಖಚಿತ.
ಸ್ವತಃ ನಿರ್ಮಾಪಕರಾಗಿರುವ ಕುಮಾರಸ್ವಾಮಿ ಸ್ವತಃ ಪುತ್ರ ನಿಖಿಲ್ ಬೆನ್ನಿಗೆ ನಿಂತಿದ್ದಾರೆ, ಕೇವಲ ದರ್ಶನ್ ಮತ್ತು ಯಶ್ ಮಾತ್ರವಲ್ಲ, ಪುನೀತ್ ಮತ್ತು ಸುದೀಪ್ ಕೂಡ ಸುಮಲತಾ ಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದ್ದಾರೆ,
ಪುನೀತ್ ರಾಜ್ ಕುಮಾರ್ ಗೀತಾ ಶಿವರಾಜ್ ಕುಮಾರ್ ಅವರ ಭಾಮೈದುನ,  ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಸಹೋದರಿ, 
2018ರಲ್ಲಿ ಯಶ್ ಬಿಜೆಪಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದರು, ಈ ಬಾರಿ ಸ್ಯಾಂಡಲ್ ವುಟ್ ನಟರುಗಳು ಸಮುಲತಾ ಪರವಾಗಿ ಪ್ರಚಾರಕ್ಕಿಳಿಯಲಿದ್ದಾರೆ.
ಅಂಬರೀಷ್ ಮಂಡ್ಯದ ಗಂಡು ಎಂದೇ ಪ್ರಸಿದ್ದರಾಗಿದ್ದರು, ಅಂಬರೀಶ್ ಅಭಿಮಾನಿಗಳು ಸುಮಲತಾ ಅವರ ವೋಟ್ ಬ್ಯಾಂಕ್ ಅಗಿದ್ದಾರೆ, ಅಂಬರೀಷ್ ಅವರ ಜನಪ್ರಿಯತೆ ಸುಮಲತಾ ಅವರ ಆತ್ಮವಿಶ್ವಾಸ ಹೆಚ್ಚಿಸಿದೆ.
ಸುಮಲತಾ ಅಂಬರೀಷ್ ಅವರ ಪುತ್ರ ಅಭಿಷೇಕ್ ಕೂಡ ಸಿನಿಮಾರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ, ಇನ್ನೂ ನಿಖಿಲ್ ಕೂಡ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ, 
ನನ್ನ ಜೊತೆ ಸಾರಥಿ ಮತ್ತು ರಾಕಿ ಬಾಯ್ ಜೊತೆಗಿದ್ದಾರೆ ಎಂದು ಸುಮಲತಾ ಯಶ್ ಮತ್ತು ದರ್ಶನ್ ಬಗ್ಗೆ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com