ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ರೇವಣ್ಣ, ಹಾಸನ, ತುಮಕೂರು,ಮಂಡ್ಯ (ಹೆಚ್ ಎಂಟಿ) ಕ್ಷೇತ್ರಗಳನ್ನು ಸ್ಮರಿಸದೇ ಇದ್ದರೆ ಬಿಜೆಪಿ ನಾಯಕರಿಗೆ ತಿಂದ ಊಟ ಅರಗುವುದಿಲ್ಲ , ನಿದ್ರೆ ಬರುವುದಿಲ್ಲ. ಇದುವರೆಗೆ ಬಿಜೆಪಿ ನಾಯಕರು ರಾಮನ ಭಜನೆ ಮಾಡುತ್ತಿದ್ದರು, ಈಗ ದೇವೇಗೌಡರ ಕುಟುಂಬದ ಭಜನೆ ಮಾಡುತ್ತಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಗೆದ್ದು ತಮ್ಮ ಕುಟುಂಬ ಸದಸ್ಯರು ದೆಹಲಿಗೆ ತೆರಳುವುದು ನಿಶ್ಚಿತ ಎಂದರು.