ಬೆಂಗಳೂರು: ನಾವ್ಯಾರೂ ಅಣಬೆಗಳ ರೀತಿ ಬೆಳೆದವರಲ್ಲ. ಹೋರಾಟದ ಮೂಲಕ ಬೆಳೆದು ಬಂದವರು ಎಂದು ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಾನು ಮೋದಿ, ಆಡ್ವಾಣಿ ಹೆಸರು ಹೇಳಿದ್ದು ನಿಜ. ಆದರೆ ಅವರೆಲ್ಲಾ ಕುಟುಂಬ ನಾಯಕರಲ್ಲ, ಸಾರ್ವಜನಿಕ ನಾಯಕರು. ಕುಮಾರಸ್ವಾಮಿ ರೀತಿ ನಾವೇನು ಕುಟುಂಬ ರಾಜಕಾರಣದ ಹಿನ್ನೆಲೆಯಿಂದ ಬಂದವರಲ್ಲ. ನಮ್ಮ ಕುಟುಂಬದಲ್ಲಿ ಯಾರೂ ರಾಜಕಾರಣಿಗಳಿಲ್ಲ ಎಂದು ಹೇಳಿದ್ದಾರೆ.
ನಾವು ಕಷ್ಟಪಟ್ಟು ಬೆಳೆದು ಬಂದಿದ್ದೇವೆ. ನಾವೇನೂ ಮೋದಿ ಹೆಸರು ಹೇಳಿಕೊಂಡು ಅಶೋಕ್ ರೀತಿ ಬೆಳೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ಮೂದಲಿಸಿದ್ದರು.
ನೈಟ್ ಕ್ಲಬ್, ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಹಣದಿಂದ ಅನರ್ಹ ಶಾಸಕರನ್ನು ಖರೀದಿ ಮಾಡಿದ್ದಾರೆಂದು ಕುಮಾರಸ್ವಾಮಿ ಮಾಡಿದ ಆರೋಪಕ್ಕೂ ಆರ್. ಅಶೋಕ್ ತಿರುಗೇಟು ಕೊಟ್ಟಿದ್ದಾರೆ.
ನಮ್ಮ ಸರ್ಕಾರ ಯಾವುದೇ ಕ್ರಿಕೆಟ್ ಬೆಟ್ಟಿಂಗ್, ನೈಟ್ ಕ್ಲಬ್ಗೆ ಅವಕಾಶ ಕೊಟ್ಟಿಲ್ಲ. ಬೆಟ್ಟಿಂಗ್ನಿಂದ ಹಣ ಪಡೆದವರು ಯಾರು ಎಂದು ಮೊದಲು ಹೇಳಲಿ. ಸುಮ್ಮನೆ ಹಿಟ್ ಅಂಡ್ ರನ್ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
Advertisement