'ನಿಖಿಲ್ ಒಳ್ಳೆ ಹುಡುಗ, ನನ್ನ ಮಗನಿದ್ದಂತೆ: ದೊಡ್ಡದಾಗಿ ಮೀಸೆ ತಿರುವಿ, ಕರೆತಂದು ಸೋಲಿಸಿದರು'

ನಿಖಿಲ್ ಕುಮಾರಸ್ವಾಮಿ ಒಳ್ಳೆಯ ಹುಡುಗ,  ಆತನಿಗೆ ರಾಜಕಾರಣ ಮಾಡೋದಕ್ಕೆ ಟೈಮ್ ಇತ್ತು,  ದೊಡ್ಡದಾಗಿ ಮೀಸೆ ತಿರುಗಿ, ಕರೆತಂದು  ಆತನನ್ನು ಸೋಲಿಸಿದರು ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.
ನಿಖಿಲ್ ಕುಮಾರ್
ನಿಖಿಲ್ ಕುಮಾರ್
Updated on

ಮಂಡ್ಯ: ನಿಖಿಲ್ ಕುಮಾರಸ್ವಾಮಿ ಒಳ್ಳೆಯ ಹುಡುಗ,  ಆತನಿಗೆ ರಾಜಕಾರಣ ಮಾಡೋದಕ್ಕೆ ಟೈಮ್ ಇತ್ತು,  ದೊಡ್ಡದಾಗಿ ಮೀಸೆ ತಿರುಗಿ, ಕರೆತಂದು  ಆತನನ್ನು ಸೋಲಿಸಿದರು ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಖಿಲ್ ಎಲ್ಲೋ ಒಂದು ಕಡೆ ರಾಜಕಾರಣ ಮಾಡಿಕೊಂಡು ತಮ್ಮ ಪಾಡಿಗೆ ತಾವಿದ್ದರು.ಅವರನ್ನು ಕರೆತಂದು ಸೋಲಿಸಿದರು. 

ಪುಟ್ಟರಾಜು ಚುನಾವಣೆ ಜವಾಬ್ದಾರಿ ತಗೆದುಕೊಂಡಿದ್ದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಕಾರಣ ಎಂದ ಚೆಲುವರಾಯಸ್ವಾಮಿ ಆರೋಪಿಸಿದ್ದಾರೆ.

ಇನ್ನೂ ನನಗೂ ಕುಮಾರಸ್ವಾಮಿಗೂ ವೈರತ್ವ ಇದೆ.  ಹಾಗಂತ ನಿಖಿಲ್ ಗೂ ವೈರತ್ವ ಮಾಡೋದಕ್ಕೆ ಆಗುತ್ತ. ಅವನೂ ನನ್ನ ಮಗ ಇದ್ದಂತೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com