ಬೆಳಗಾವಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಏಜೆಂಟ್ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಜಾರಕಿಹೊಳಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಏಜೆಂಟ್ ಆಗಿ ಸ್ಪೀಕರ್ ಕೆಲಸ ನಿರ್ವಹಿಸಿದರು. ತಮ್ಮ ನಾಯಕರ ತೃಪ್ತಿಪಡಿಸಲು ನಮ್ಮನ್ನು ಅನರ್ಹಗೊಳಿಸಿದರು ಎಂದು ಆರೋಪಿಸಿದ್ದಾರೆ.
ಸಲ್ಲಿಸಿದ ನನ್ನ ರಾಜೀನಾಮೆಯನ್ನು ಮೂರು ತಿಂಗಳ ಕಾಲ ತಡೆ ಹಿಡಿದರು. ನಾರಾಯಣಗೌಡಗೆ ಬೇಗ ರಾಜೀನಾಮೆ ಕೊಡಿ ಎಂದು ರಮೇಶ ಕುಮಾರ್ ಅವರೇ ಪ್ರೋತ್ಸಾಹ ನೀಡಿದ್ದರು. ಸಮ್ಮಿಶ್ರ ಸರ್ಕಾರವನ್ನು ಬೇಗ ಪತನಗೊಳಿಸಿ ಎಂದು ಬೆಂಗಳೂರು ಶಾಸಕರಿಗೆ ಅವರೇ ಒತ್ತಾಯ ಮಾಡಿದ್ದರು ಎಂದು ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದ ಹಿತಾಸಕ್ತಿಯಿಂದಾಗಿ ನಾವು ಪಕ್ಷ ತೊರೆದೆವು, ಕುಮಾರಸ್ವಾಮಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ದಿನದಿಂದ ನಮಗೆ ಬೇಸರ ಆಗಿತ್ತು, ಕುಮಾರಸ್ವಾಮಿ ಮತ್ತು ಕೆಲ ಕಾಂಗ್ರೆಸ್ ನಾಯಕರ ವರ್ತನೆಯಿಂದ ನಾವು ಬೇಸತ್ತು ಹೋಗಿದ್ದೆವು ಎಂದು ರಮೇಶ್ ಹೇಳಿದ್ದಾರೆ.
Advertisement