ಯಡಿಯೂರಪ್ಪ ತಂತಿ ಮೇಲಿಂದಲೇ ಪ್ರವಾಹ ಸಂತ್ರಸ್ತರ ಕಡೆಗೆ ನೋಡಲಿ: ಕುಮಾರಸ್ವಾಮಿ

ಮೈತ್ರಿ ಸರ್ಕಾರದ ಅತೃಪ್ತರನ್ನು ಅಡ್ಡದಾರಿಯಲ್ಲಿ ತೃಪ್ತಿಪಡಿಸಿ ಮುಖ್ಯಮಂತ್ರಿ ಪದವಿಗೇರಿದ ಬಿ.ಎಸ್. ಯಡಿಯೂರಪ್ಪ ತಂತಿ ಮೇಲೆ ನಡೆಯುತ್ತಿದ್ದು, ತಂತಿಯ ಮೇಲಿನಿಂದಲೇ ಪ್ರವಾಹ ಸಂತ್ರಸ್ತರ ಕಡೆಗೂ ನೋಡಲಿ...
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಮೈತ್ರಿ ಸರ್ಕಾರದ ಅತೃಪ್ತರನ್ನು ಅಡ್ಡದಾರಿಯಲ್ಲಿ ತೃಪ್ತಿಪಡಿಸಿ ಮುಖ್ಯಮಂತ್ರಿ ಪದವಿಗೇರಿದ ಬಿ.ಎಸ್. ಯಡಿಯೂರಪ್ಪ ತಂತಿ ಮೇಲೆ ನಡೆಯುತ್ತಿದ್ದು, ತಂತಿಯ ಮೇಲಿನಿಂದಲೇ ಪ್ರವಾಹ ಸಂತ್ರಸ್ತರ ಕಡೆಗೂ ನೋಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಸರ್ಕಾರದಲ್ಲಿ ತಾವು ತಂತಿ ಮೇಲೆ ನಡೆಯುತ್ತಿದ್ದು, ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾಗಿದೆ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಇವರ ತಂತಿ ಮೇಲಿನ ನಡಿಗೆಯನ್ನು ವಿಪಕ್ಷಗಳು ಕುಟುಕಲಾರಂಭಿಸಿದ್ದು, ಸರ್ಕಾರ ನಡೆಸಲು ಸಾಧ್ಯವಿಲ್ಲದಿದ್ದರೆ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

ಈ ಮಧ್ಯೆ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಪ್ರವಾಹ ಸಂತ್ರಸ್ತರ ವಿಚಾರವಾಗಿ ಇಂತಹ ಹೇಳಿಕೆ ನೀಡಿರುವುದಾಗಿ ಸಿಎಂ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

ಯಡಿಯೂರಪ್ಪ ಸಮರ್ಥನೆ ಕುರಿತು ಟ್ವೀಟ್ ಮೂಲಕ ಅವರನ್ನು ಟೀಕಿಸಿರುವ ಕುಮಾರಸ್ವಾಮಿ, ಪ್ರವಾಹದಿಂದ ಮನೆ ಮಠ ಕಳೆದುಕೊಂಡು ‌ಬೀದಿಗೆ ಬಿದ್ದಿರುವವರ ಬದುಕನ್ನು ನಿಮ್ಮ ಸರ್ಕಾರಕ್ಕೆ ‌ಕಟ್ಟಿ ಕೊಡಲು ಸಾಧ್ಯವಾಗದಿದ್ದರೆ‌, ಜನರೇ ನಿಮ್ಮನ್ನು 'ತಂತಿ‌' ಮೇಲಿನಿಂದ ಕೆಳಗೆ ಬೀಳಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com