ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ: ಸಭಾಪತಿ ಸ್ಥಾನಕ್ಕೆ ಜೆಡಿಎಸ್ ಬೇಡಿಕೆ

ವಿಧಾನ ಪರಿಷತ್ ಸಭಾಪತಿ ಪದಚ್ಯುತಗೊಳಿಸುವ ವಿಚಾರದಲ್ಲಿ ಜೆಡಿಎಸ್ ಹೊಸ ತಂತ್ರ ರೂಪಿಸಿದ್ದು, ಸಭಾಪತಿ ಸ್ಥಾನ ಕೊಟ್ಟವರಿಗೆ ಬೆಂಬಲ ಎನ್ನುವ ದಾಳ ಉರುಳಿಸಿದೆ.
ಜೆಡಿಎಸ್
ಜೆಡಿಎಸ್
Updated on

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಪದಚ್ಯುತಗೊಳಿಸುವ ವಿಚಾರದಲ್ಲಿ ಜೆಡಿಎಸ್ ಹೊಸ ತಂತ್ರ ರೂಪಿಸಿದ್ದು, ಸಭಾಪತಿ ಸ್ಥಾನ ಕೊಟ್ಟವರಿಗೆ ಬೆಂಬಲ ಎನ್ನುವ ದಾಳ ಉರುಳಿಸಿದೆ.

ಹಾಲಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ನೊಟೀಸ್ ನೀಡಿದ್ದು, ಇಂದಿಗೆ 14 ದಿನ ಮುಕ್ತಾಯವಾಗಿದ್ದು, ಈ ಬಗ್ಗೆ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಬಗ್ಗೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. 

ಈ ನಡುವೆ ಕಾಂಗ್ರೆಸ್‌ನ ಕೆಲವು ವಿಧಾನ ಪರಿಷತ್ ಸದಸ್ಯರು ಜೆಡಿಎಸ್ ನಾಯಕರೊಂದಿಗೆ ಈಗಿರುವ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗಲು ಸಹಕರಿಸುವಂತೆ ಜೆಡಿಎಸ್ ಪರಿಷತ್ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಜೆಡಿಎಸ್ ಸದಸ್ಯರು ಸಭಾಪತಿ ಸ್ಥಾನದ ಷರತ್ತು ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com