80ರ ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹ: 1978 ರಿಂದಲೂ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ!

ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ತಾಲೂಕಿನ ಶ್ರೀರಾಮನಗರ ಗ್ರಾಮ ಪಂಚಾಯಿತಿಯಲ್ಲಿ ವಿಜೇತರಾಗಿ ಮತ್ತೆ ಆಯ್ಕೆ ಬಯಸಿ ರೆಡ್ಡಿ ವೀರರಾಜು ಅವರು ತಮ್ಮ 80ರ ಇಳಿವಯಸ್ಸಿನಲ್ಲಿಯೂ ಚುನಾವಣಾ ಕಣಕ್ಕಳಿದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ತಾಲೂಕಿನ ಶ್ರೀರಾಮನಗರ ಗ್ರಾಮ ಪಂಚಾಯಿತಿಯಲ್ಲಿ ವಿಜೇತರಾಗಿ ಮತ್ತೆ ಆಯ್ಕೆ ಬಯಸಿ ರೆಡ್ಡಿ ವೀರರಾಜು ಅವರು ತಮ್ಮ 80ರ ಇಳಿವಯಸ್ಸಿನಲ್ಲಿಯೂ ಚುನಾವಣಾ ಕಣಕ್ಕಳಿದಿದ್ದಾರೆ.

ಪ್ರಸ್ತುತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶ್ರೀರಾಮನಗರ ಗ್ರಾ.ಪಂ. ಶ್ರೀರಾಮನಗರ ಗ್ರಾಮದ 7ನೇ ಅಭ್ಯರ್ಥಿಯಾಗಿರುವ ಇವರು ಚುನಾವಣೆ ರಾಜಕಾರಣದಲ್ಲಿ ದಣಿವರಿಯದೇ ತಮ್ಮ 80ನೇ ವಯಸ್ಸಿನಲ್ಲಿ  ಸ್ಪರ್ಧಿಸುವ ಮೂಲಕ ಪಂಚಾಯಿತಿ ಚುನಾವಣೆಗೆ ರಂಗು ತಂದಿದ್ದಾರೆ. 

1978 ರಲ್ಲಿ ಶ್ರೀರಾಮನಗರ ವಾರ್ಡ್ ಆಗಿ ರಚನೆಯಾದಾಗಿನಿಂದ 6 ಬಾರಿ ಅವಿರೋಧವಾಗಿ ರೆಡ್ಡಿ ವೀರರಾಜು ಆಯ್ಕೆಯಾಗಿದ್ದಾರೆ. ಇವರ ಸಾಮಾಜಿಕ ಕಾಳಜಿ ಹಾಗೂ ಜನರ ಸೇವೆಯ ಮಾಡುವ ಮನಸ್ಸು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಆದರೆ ಇತ್ತೀಚಿನ ಚುನಾವಣೆಗಳಲ್ಲಿ ಬಹು ದೊಡ್ಡ ಬದಲಾವಣೆಯಾಗಿದ್ದು, ಇಂದಿನ ಚುನಾವಣೆಗಳಲ್ಲಿ ಹಣ ಮತ್ತು ತೋಳ್ಬಲಕ್ಕೆ ಹೆಚ್ಚು ಮಹತ್ವ. ಆದರೆ ನಮ್ಮ ಜನ ನನ್ನ ಮೇಲೆ ವಿಶ್ವಾಸ ಇರಿಸಿರುವುದಕ್ಕೆ ನಾನು ಇಲ್ಲಿಯವರೆಗೆ ಆಯ್ಕೆಯಾಗಿದ್ದೇನೆ ಎಂದು ರೆಡ್ಡಿ ವೀರರಾಜು ತಿಳಿಸಿದ್ದಾರೆ.  ಅವರ ಮಗ ಕನಕಗಿರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವುದರಿಂದ ಈ ಬಾರಿಯೂ ಅವರು ಗೆಲುವು ಸಾಧಿಸುವ ನಿರೀಕ್ಷೆಯಿದೆ ಎಂದು ರಾಜಕೀಯ ವೀಕ್ಷಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com