ಪಾಕಿಸ್ತಾನ​ ಪರ ಮಾತಾಡುವ ಕುಮಾರಸ್ವಾಮಿಯವರದ್ದೂ ಒಂದು ಬದುಕಾ?

ಪಾಕಿಸ್ತಾನ ಪರ ವಹಿಸಿ ಮಾತನಾಡುವ ಮಾಜಿ ಸಿಎಂ ಕುಮಾರಸ್ವಾಮಿ ಅವರದು ಒಂದು ಬದುಕಾ ಎಂದು ಸಚಿವ ಆರ್​ ಅಶೋಕ್​  ಪ್ರಶ್ನಿಸಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಪಾಕಿಸ್ತಾನ ಪರ ವಹಿಸಿ ಮಾತನಾಡುವ ಮಾಜಿ ಸಿಎಂ ಕುಮಾರಸ್ವಾಮಿ ಅವರದು ಒಂದು ಬದುಕಾ ಎಂದು ಸಚಿವ ಆರ್​ ಅಶೋಕ್​  ಪ್ರಶ್ನಿಸಿದ್ದಾರೆ.

ಪಾಕಿಸ್ತಾನ ಇಲ್ಲದಿದ್ದರೆ ನೀವು ಇಲ್ಲಿ ಒಂದು ಮತವನ್ನು ಕೂಡ ಪಡೆಯುತ್ತಿರಲಿಲ್ಲ. ಅದಕ್ಕಾಗಿಯೇ ಪಾಕಿಸ್ತಾನ ನಾಮ ಸ್ಮರಣೆ ನಿಮ್ಮ ಕಾಯಕವಾಗಿದೆ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಉದ್ದೇಶಿಸಿ ಟ್ವೀಟ್​ ಮಾಡಿದ್ದರು.

ಕುಮಾರಸ್ವಾಮಿ ಅವರ ಈ ಟ್ವೀಟ್​ಗೆ  ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್​ಗೆ ಹೋಗುವ ಆತಂಕದಲ್ಲಿ ಅವರು ಈ ರೀತಿ ಮಾತಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು  ಸೆಳೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಪಾಕ್​ ಅನ್ನು ಬೆಂಬಲಿಸುವವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಪ್ರತಿಕ್ರಿಯಿಸಿದರು.

ನಮಗೆ ಪಾಕ್​ ಧ್ವಜ ನೋಡಿದರೆ ಸಿಟ್ಟು ಬರುತ್ತದೆ. ಆದರೆ, ಇಲ್ಲಿದ್ದುಕೊಂಡು ಇವರುಗಳು ಪಾಕ್​ ಬೆಂಬಲಿಸುತ್ತಾರೆ ಎಂದು ಕೂಡ ಹರಿಹಾಯ್ದರು. ಇದೇ ವೇಳೆ ಮಂಗಳೂರು ಬಾಂಬ್​ ಪ್ರಕರಣ ಕುರಿತು ಮಾತನಾಡಿದ ಅವರು, ಆದಿತ್ಯನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆದಿತ್ಯನದ್ದು ಮಾನಸಿಕ ಸ್ಥಿತಿ ಸರಿಯಿಲ್ಲ. ಆ ಬಗ್ಗೆ ವೈದ್ಯರು ಕೂಡ ಹೇಳಬೇಕಿದೆ. ಮುಸ್ಲಿಂ ಇರಲಿ, ಹಿಂದೂ ಆಗಿರಲಿ. ಎಲ್ಲರಿಗೂ ಕಾನೂನು ಒಂದೇ. ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com