ಮೈಸೂರಿಗೊಬ್ಬ ಆ್ಯಕ್ಟಿಂಗ್ ಮಿನಿಸ್ಟರ್: ಸಾ.ರಾ.ಮಹೇಶ್ ಕುಹಕ

ಮೈಸೂರಿಗೆ ಒಬ್ಬರು ಆ್ಯಕ್ಟಿಂಗ್, ಮತ್ತೊಬ್ಬರು ಅಧಿಕೃತ ಸಚಿವರಿದ್ದಾರೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಕುಹಕವಾಡಿದ್ದಾರೆ.
ಸಾ ರಾ ಮಹೇಶ್
ಸಾ ರಾ ಮಹೇಶ್
Updated on

ಮೈಸೂರು: ಮೈಸೂರಿಗೆ ಒಬ್ಬರು ಆ್ಯಕ್ಟಿಂಗ್, ಮತ್ತೊಬ್ಬರು ಅಧಿಕೃತ ಸಚಿವರಿದ್ದಾರೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಕುಹಕವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸೂರಿನ ಜನ ಅವರನ್ನು 90 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದರು. ಈಗ ಅದರ ಅರ್ಧದಷ್ಟು ಮತಗಳಿಂದ ಸೋಲಿಸಿದ್ದಾರೆ. ಆ ಮಹಾಶಯನ ಹೆಸರು ನಾನು ಹೇಳುವುದಿಲ್ಲ ಎಂದು ಪರೋಕ್ಷವಾಗಿ ಹೆಚ್.ವಿಶ್ವನಾಥ್ ವಿರುದ್ಧ ಕಿಡಿಕಾರಿದರು.

ಜಿಲ್ಲಾ ಸಚಿವರ ಗಮನಕ್ಕೆ ಬಾರದಂತೆ ಮೈಸೂರಿನಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಅಬಕಾರಿ ಜಿಲ್ಲಾಧಿಕಾರಿಗಳನ್ನು ಕೇವಲ 9 ತಿಂಗಳಲ್ಲಿನಲ್ಲಿಯೇ ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಪತ್ರ ವ್ಯವಹಾರ ಮಾಡಿದವರು ಯಾರು ಎಂದು ವಿಶ್ವನಾಥ್ ಹೆಸರು ಹೇಳದೇ ಪ್ರಶ್ನಿಸಿದರು.

ಅಬಕಾರಿ ಇಲಾಖೆಯಲ್ಲಿ 2 ಕೋಟಿ ಅವ್ಯವಹಾರ, ಲೋಕೋಪಯೋಗಿ ಇಲಾಖೆಯಲ್ಲಿ 50 ಲಕ್ಷ ರೂ.ಗೆ ಎಇ ಹುದ್ದೆಗೆ ನೇಮಕ, ಅಕ್ಕಿ ಗಿರಣಿಗಳಿಂದ ಲಾರಿಗಟ್ಟಲೆ ಅಕ್ಕಿ ಸಂಗ್ರಹ, ಈ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ತಾವು ಪತ್ರ ಬರೆದಿರುವುದಾಗಿ ಸಾ.ರಾ.ಮಹೇಶ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com